Advertisement

ಮಿದುಳು ಕ್ಯಾನ್ಸರ್‌ ಚಿಕಿತ್ಸೆ ಭಾರತೀಯ ವೈದ್ಯೆತಂಡ ಕೊಡುಗೆ

10:31 PM May 19, 2023 | Team Udayavani |

ವಾಷಿಂಗ್ಟನ್‌: ಮಿದುಳಿನ ಕ್ಯಾನ್ಸರ್‌ಗೆ ಗುರಿಯಾಗಿರುವ ರೋಗಿಗಳಿಗೆ ನೀಡುವ ಚಿಕಿತ್ಸೆಗೆ ಬಹುದೊಡ್ಡ ಸಹಾಯ ಒದಗಿಸುವಂಥ ಆವಿಷ್ಕಾರವನ್ನು ಭಾರತ ಮೂಲದ ವೈದ್ಯೆ ನೇತೃತ್ವದ ಅಮೆರಿಕ ವೈದ್ಯರ ತಂಡ ಪತ್ತೆಹಚ್ಚಿದ್ದು, ಈ ಆವಿಷ್ಕಾರ ರೋಗಿಗಳ ಜೀವ ಉಳಿಸುವಲ್ಲಿ ಸಹಾಯವಾಗಲಿದೆ ಎಂದು “ನೇಚರ್‌” ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.

Advertisement

ವರದಿಗಳ ಪ್ರಕಾರ ಭಾರತದ ಕೇರಳ ಮೂಲದ ವೈದ್ಯೆಯಾದ ಸರಿತಾ ಕೃಷ್ಣಾ ಅವರ ನೇತೃತ್ವದಲ್ಲಿ ಸ್ಯಾನ್‌ಫ್ಯಾನ್ಸಿಸ್ಕೋ ಮೆಡಿಕಲ್‌ ಸೆಂಟರ್‌ ಹಾಗೂ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾದ ವಿಜ್ಞಾನಿಗಳು ಸಂಶೋಧನೆಯೊಂದನ್ನು ಕೈಗೊಂಡಿದ್ದಾರೆ. ಆ ಪ್ರಕಾರ ಕ್ಯಾನ್ಸರ್‌ಗೆ ಗುರಿಯಾಗಿರುವ ಮಿದುಳಿನ ಜೀವಕೋಶಗಳು ಇತರೆ ಆರೋಗ್ಯಕರ ಜೀವಕೋಶಗಳೊಂದಿಗೆ ಸಂಪರ್ಕಸಾಧಿಸಬಲ್ಲವು. ಈ ರೀತಿ ಸಂಪರ್ಕ ಸಾಧಿಸಿದರೆ ರೋಗಿಯ ಮಿದುಳಿನ ಕ್ಯಾನ್ಸರ್‌ ಉಲ್ಬಣಗೊಳ್ಳುವ ಜತೆಗೆ ಆತನ ಅರಿವಿನ ಶಕ್ತಿ ವೇಗವಾಗಿ ನಷ್ಟವಾಗುವುದಲ್ಲದೇ ಬೇಗ ಸಾವಿನ ಅಂಚಿಗೆ ನೂಕಬಲ್ಲದಂತೆ.

ಆದರೆ, ಈ ಕ್ಯಾನ್ಸರ್‌ಪೀಡಿತ ಹಾಗೂ ಆರೋಗ್ಯಕರ ಜೀವಕೋಶಗಳ ಸಂಪರ್ಕವನ್ನು ಸಾಮಾನ್ಯವಾಗಿ ಬಳಕೆಮಾಡುವ ಆ್ಯಂಟಿ-ಸೀಜರ್‌ ಡ್ರಗ್‌ ಗುಣಪಡಿಸಬಲ್ಲದು ಎಂದು ಸಂಶೋಧಕರ ತಂಡ ಪತ್ತೆ ಹಚ್ಚಿದೆ. ಈ ಚಿಕಿತ್ಸೆ ವಿಧಾನವು ಮಿದುಳಿನ ಕ್ಯಾನ್ಸರ್‌ನಲ್ಲಿ ಅತೀ ಅಪಾಯಕಾರಿ ಎನ್ನಲಾಗುವ ಗ್ಲಿಯೋಬ್ಲಾಸ್ಟೋಮಾ ರೋಗಕ್ಕೆ ತುತ್ತಾದ ರೋಗಿಗಳ ಜೀವಿತಾವಧಿ ವೃದ್ಧಿಸಲು ಸಹಾಯವಾಗಲಿದೆ ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next