Advertisement

Brahamavara: ಪ್ರತ್ಯೇಕ ಎರಡು ಆತ್ಮಹ*ತ್ಯೆ ಪ್ರಕರಣ

11:23 PM Oct 21, 2024 | Team Udayavani |

ಯಡ್ತಾಡಿ: ಮಹಿಳೆ ಆತ್ಮಹತ್ಯೆ
ಬ್ರಹ್ಮಾವರ: ಯಡ್ತಾಡಿ ಗ್ರಾಮದ ಶಾಲಿನಿ(34) ಶನಿವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Advertisement

ಪತಿಗೆ ಮೆಸೇಜ್‌ ಮಾಡಿ ತಾನು ಸಾಯುತ್ತೇನೆ, ಮಕ್ಕಳನ್ನು ತನ್ನ ತಂದೆ ತಾಯಿಯ ಹತ್ತಿರ ಕೊಡಿ ಎಂದು ಹೇಳಿದ್ದರು ಎನ್ನಲಾಗಿದೆ. ಮೃತರ ತಂದೆ ಗಿಳಿಯಾರಿನ ಜಯರಾಮ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಉಪ್ಪೂರು: ನದಿಗೆ ಹಾರಿ ಆತ್ಮಹತ್ಯೆ
ಬ್ರಹ್ಮಾವರ: ಉಪ್ಪೂರು ಬಳಿ ನದಿಗೆ ಹಾರಿ ಸುಮನೀಶ್‌(42) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರು ಸಾಲ ಬಾಧೆ ಅಥವಾ ಬೇರೆ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next