Advertisement

ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ನಿರ್ಮಾಣ ಕಾಮಗಾರಿ ಆರಂಭ

12:30 PM Aug 16, 2022 | Team Udayavani |

ಮಹಾನಗರ: ಪಾಲಿಕೆ ವ್ಯಾಪ್ತಿಯಲ್ಲಿರುವ ಲೇಡಿಹಿಲ್‌ ಶಾಲೆ ಬಳಿ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದ ಕಾಮಗಾರಿ ಆರಂಭಗೊಂಡಿದೆ. ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ಈ ವೃತ್ತವನ್ನು ಅಭಿವೃದ್ಧಿಪಡಿಸುತ್ತಿದ್ದು, ತಿಂಗಳ ಹಿಂದೆ ಶಿಲಾನ್ಯಾಸ ನಡೆದಿತ್ತು. ಒಂದು ವಾರದಿಂದ ಕಾಮಗಾರಿ ಆರಂಭಗೊಂಡಿದ್ದು, ನವರಾತ್ರಿಯ ವೇಳೆಗೆ ಈ ವೃತ್ತ ನಿರ್ಮಾಣ ಪೂರ್ಣಗೊಳ್ಳಬೇಕು ಎಂಬ ಆಶಯ ಮುಡಾದ್ದು. ಈ ಹಿನ್ನೆಲೆಯಲ್ಲಿ ವೃತ್ತ ಕಾಮಗಾರಿಗೆ ವೇಗ ನೀಡಲು ನಿರ್ಧರಿಸಲಾಗಿದ್ದು, ಈಗಾಗಲೇ ವೃತ್ತಾಕಾರದಲ್ಲಿ ಆವರಣದ ಕಾಮಗಾರಿ ನಡೆಯುತ್ತಿದೆ.

Advertisement

ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಮುಡಾದಿಂದ ಈ ವೃತ್ತ ಅಭಿವೃದ್ಧಿಯಾಗುತ್ತಿದ್ದು, ವೃತ್ತ ಸುಂದರಗೊಳಿಸಿ ವೃತ್ತದ ಮಧ್ಯ ಭಾಗದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕಂಚಿನ ಮೂರ್ತಿ ಅನಾವರಣಗೊಳಿಸಲಾಗುತ್ತದೆ. ಅದರ ಸುತ್ತಲೂ ಸುಂದರ ಮಂಟಪ ನಿರ್ಮಾಣ ಮಾಡಲಾಗುತ್ತದೆ. ವೃತ್ತದೊಳಗೆ ಪುಟ್ಟ ಗಾರ್ಡನ್‌ ನಿರ್ಮಿಸಲಾಗು ತ್ತದೆ. ಬಳಿಕ ಅಲ್ಲಿ ನೀರಿನ ಚಿಲುಮೆ ಅಳ ವ ಡಿಸಿ, ಲೇಸರ್‌ ಮೂಲಕ ಚಿತ್ತಾಕರ್ಷಕ ಗೊಳಿಸಲಾಗುತ್ತದೆ. ಇದಕ್ಕೆಂದು ನೀರಿನ ವ್ಯವಸ್ಥೆಯನ್ನು ಸದ್ಯದಲ್ಲೇ ಸ್ಥಾಪನೆ ಮಾಡಲಾಗುತ್ತದೆ.

ವೃತ್ತದ ಜತೆ ರಸ್ತೆಯೂ ಅಭಿವೃದ್ಧಿ

ಬ್ರಹ್ಮಶ್ರೀ ನಾರಾಯಣ ಗುರು ವೃತ್ತ ಅಭಿವೃದ್ಧಿಯ ಜತೆಗೆ ಈ ಪ್ರದೇಶದಲ್ಲಿನ ರಸ್ತೆಗೂ ಹೊಸ ಮೆರುಗು ನೀಡಲು ಮುಡಾ ಮುಂದಾಗಿದೆ. ಸ್ಮಾರ್ಟ್‌ ಸಿಟಿಯಾಗಿ ರೂಪುಗೊಳ್ಳುತ್ತಿರುವ ಮಂಗಳೂರು ನಗರದ ಪ್ರಮುಖ ರಸ್ತೆ ಎಂದೆನಿಸಿದ “ಬ್ರಹ್ಮಶ್ರೀ ನಾರಾಯಣ ಗುರು ವೃತ್ತ’ದಿಂದ ಕೊಟ್ಟಾರ ಚೌಕಿ ನಡುವಣ ರಸ್ತೆಯನ್ನು ಮಾದರಿಯಾಗಿ ನಿರ್ಮಿಸಲು ಉದ್ದೇಶಿಸಲಾಗಿದೆ. ಇದಕ್ಕೆ ಈಗಾಗಲೇ ಸರ್ವೇ ಕಾರ್ಯ ಪೂರ್ಣಗೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next