Advertisement

ಚತುರ್ದಿಕ್ಕುಗಳಿಂದಲೂ ಭರದಿಂದ ನಡೆದಿದೆ ನವೀಕರಣ ಸಿದ್ಧತೆ

08:38 PM May 06, 2019 | mahesh |

ಬೆಳ್ತಂಗಡಿ: ನರಸಿಂಹಗಢದ ದಕ್ಷಿಣ ಬುಡದಲ್ಲಿ ಲಾೖಲ ಹಾಗೂ ನಡ ಗ್ರಾಮಸ್ಥರ ಆರಾಧ್ಯ ನೆಲೆ ಚಂದ್ಕೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವಕ್ಕೆ ಸಿದ್ಧತೆ ಭರದಿದಂದ ಸಾಗುತ್ತಿದೆ. ನೂರಾರು ಸ್ವಯಂಸೇವಕರು ಪರಿ ಶ್ರಮ, ಸಂಘಟಕರ ಮಾರ್ಗದರ್ಶನ ದಲ್ಲಿ ಹಗಲು ರಾತ್ರಿ ಎನ್ನದೆ ಸೇವಾ ಕಾರ್ಯ ನಡೆಯುತ್ತಿದ್ದು, ದೇವರ ಪುನರ್‌ ಪ್ರತಿಷ್ಠೆ, ಅಷ್ಟಬಂಧ- ಬ್ರಹ್ಮ ಕಲಶಾ ಭಿಷೇಕಕ್ಕೆ ಚತುರ್ದಿಕ್ಕುಗಳಲ್ಲಿ ಕೆಲಸ ಕಾರ್ಯ ಸಾಗುತ್ತಿದೆ. ಬೆಳ್ತಂಗಡಿಯಿಂದ ಲಾೖಲ ತಿರುವು ಪಡೆಯುತ್ತಿದ್ದಂತೆ ದಾರಿ ಯುದ್ದಕ್ಕೂ ಭಕ್ತರನ್ನು ಸ್ವಾಗತಿಸಲು ಕೇಸರಿ ಪತಾಕೆ ಸಜ್ಜಾಗಿದೆ.

Advertisement

ಹೊರೆಕಾಣಿಕೆ ವಿಶೇಷತೆ
ಮೇ 8ರಂದು ಬೆಳಗ್ಗೆ 9 ಕ್ಕೆ ಕುತ್ಯಾರು ದೇವಸ್ಥಾನದಿಂದ 100 ಜನ ಸ್ವಯಂ ಸೇವಕರ ನೇತೃತ್ವದಲ್ಲಿ ಮೆರವಣಿಗೆ ಹೊರಡಲಿದೆ. 2,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ.
6 ಎಕರೆಯಲ್ಲಿ ಪಾರ್ಕಿಂಗ್‌ ವಾಹನ ನಿಲುಗಡೆಗೆ 6 ಎಕರೆ ಪ್ರದೇಶ ಮೀಸಲಿರಿಸಿದ್ದು, 4 ಎಕರೆ ಪ್ರದೇಶದಲ್ಲಿ ಚತುಶ್ಚಕ್ರ ವಾಹನ, 2 ಎಕರೆ ಪ್ರದೇಶದಲ್ಲಿ ದ್ವಿಚಕ್ರ ವಾಹನ ನಿಲುಗಡೆಗೆ ಸ್ಥಳಾವಕಾಶ ವ್ಯವಸ್ಥೆ ಮಾಡಲಾಗಿದೆ. ಒಟ್ಟು 50 ಮಂದಿ ಸ್ವಯಂಸೇವಕರು ನಿರಂತರ ಕಾರ್ಯನಿರ್ವಹಿಸಲಿದ್ದಾರೆ.

50 ಸಾವಿರ ಚದರಡಿ ಚಪ್ಪರ
ಅಂದಾಜು 50 ಸಾವಿರ ಚದರ ಅಡಿಗೂ ಅಧಿಕ ವಿಸ್ತೀರ್ಣದ ಚಪ್ಪರ ಹಾಕಲಾಗಿದೆ. ಅನ್ನದಾನ, ಸಭಾ ಮಂಟಪ, ದೇವಸ್ಥಾನ ಸುತ್ತಮುತ್ತ, ಹಸುರುವಾಣಿಗೆ, ಕಾರ್ಯಾಲಯಕ್ಕೆ ಚಪ್ಪರ ಸಜ್ಜುಗೊಂಡಿದೆ. 50 ರಿಂದ 70 ಸಾವಿರ ಮಂದಿ ಭಾಗವಹಿಸುವ ನಿರೀಕ್ಷೆಯಿಂದ ಆಡಳಿತ ಸಮಿತಿ ಭಕ್ತರಿಗೆ ಅನುಕೂಲವಾಗುವ ರೀತಿಯಲ್ಲಿ ವ್ಯವಸ್ಥೆ ಮಾಡಿದೆ.

ಭೋಜನ ವ್ಯವಸ್ಥೆ
ಸತ್ಯನಾರಾಯಣ ಭಟ್‌ ನೇತೃತ್ವದಲ್ಲಿ 50 ಮಂದಿಯ ಬಾಣಸಿಗರ ತಂಡ ಅಡುಗೆ ತಯಾರಿಯಲ್ಲಿ ತೊಡಗಲಿದೆ. ಭೋಜನಕ್ಕೆ ಸ್ಟೀಲ್‌ ತಟ್ಟೆ ಉಪಯೋಗಿಸಲಾಗುತ್ತಿದ್ದು, ಬಫೆ, ವಿವಿಐಪಿ, ಕುಳಿತು ಊಟ ಮಾಡುವ ವ್ಯವಸ್ಥೆ ಇರಲಿದೆ. ದಕ್ಷಿಣ ಭಾರತ ಶೈಲಿಯ ಭೋಜನ ಸಿದ್ಧಗೊಳ್ಳಲಿದೆ.

ಪ್ಲಾಸ್ಟಿಕ್‌ಮುಕ್ತ: ಚಿಂತನೆ
ಕುಡಿಯುವ ನೀರಿಗಾಗಿ ಪ್ಲಾಸ್ಟಿಕ್‌ ನೀರು ಬಳಸದೆ ಪ್ಯೂರಿಫೈಡ್‌ ನೀರಿನ 4 ಯಂತ್ರಗಳನ್ನು ತರಿಸಲಾಗಿದೆ. ಪ್ಲಾಸ್ಟಿಕ್‌ಮುಕ್ತ ಕಾರ್ಯಕ್ರಮ ಚಿಂತನೆ ಆಯೋಜಕರದಾಗಿದ್ದು, ಇದಕ್ಕಾಗಿ ಸ್ವತ್ಛತೆ ದೃಷ್ಟಿಯಿಂದ ಹಾಳೆ ತಟ್ಟೆಯನ್ನೂ ಬಳಸದೆ ಸ್ವತ್ಛತೆಗೆ ಆದ್ಯತೆ ನೀಡಲಾಗಿದೆ. ಸ್ವಚ್ಛತೆಗಾಗಿ 300 ಮಂದಿ ಸ್ವಯಂಸೇವಕರನ್ನು ನಿಯೋಜಿಸಲಾಗಿರುವುದು ವಿಶೇಷತೆಗಳಲ್ಲೊಂದು.

Advertisement

ದಶದ್ವಾರ
ಲಾೖಲ ಕುತ್ರೊಟ್ಟು ಸಮೀಪ 10 ಲೋಡ್‌ ಬಿದಿರಿನಿಂದ ಮುಖ್ಯದ್ವಾರವನ್ನು ಅತ್ಯಾಕರ್ಷಕವಾಗಿ ನಿರ್ಮಿಸಲಾಗಿದೆ. ಹೇಮಂತ್‌ ಅವರ 30 ಮಂದಿ ತಂಡ 10 ದಿನಗಳಿಂದ ದ್ವಾರ ನಿರ್ಮಾಣದಲ್ಲಿ ತೊಡಗಿದ್ದು, ಭವ್ಯವಾಗಿ ಮೂಡಿಬಂದಿದೆ. ಉಳಿದಂತೆ ಲಾೖಲ, ಪುತ್ರಬೈಲು, ಹೊಕ್ಕಿಲ, ಬೆಳ್ತಂಗಡಿ ಚರ್ಚ್‌, ಮಂಚದ ಪಲ್ಕೆ, ಪಡ್ಲಾಡಿ, ದರ್ಪಿಂಜ, ನಿರ್ಪರಿ, ಗಾಂಧಿನಗರದಲ್ಲಿ ಸಾಂಪ್ರದಾಯಿಕವಾಗಿ ದ್ವಾರಗಳು ನಿರ್ಮಾಣಗೊಂಡು ಸ್ವಾಗತಕ್ಕೆ ಸಜ್ಜಾಗಿವೆ.

Advertisement

Udayavani is now on Telegram. Click here to join our channel and stay updated with the latest news.

Next