Advertisement

ಅಶ್ವತ್ತದಡಿ ಗರಡಿಯಲ್ಲಿ ವಾರ್ಷಿಕ ಬ್ರಹ್ಮ ಬೈದರ್ಕಳ ನೇಮೋತ್ಸವ

06:08 PM Jan 29, 2020 | Suhan S |

ಮುಂಬಯಿ, ಜ. 28: ಬೊರಿವಲಿ ಪೂರ್ವದ ದೇವುಲ್ಪಾಡಾದ ತುಳುನಾಡಿನ ಅವಳಿ ವೀರರಾದ ಕೋಟಿ ಚೆನ್ನಯರನ್ನು ಒಳಗೂಂಡಿರುವ ಓಂ ಶ್ರೀ ಜಗದೀಶ್ವರಿ ಸೇವಾ ಸಮಿತಿ ಸಂಚಾಲಕತ್ವದ ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ಜ. 25 ರಂದು ರಾತ್ರಿ 46ನೇ ವಾರ್ಷಿಕ ಬ್ರಹ್ಮ ಬೈದರ್ಕಳ ನೇಮೋತ್ಸವವು ಶ್ರೀ ಕ್ಷೇತ್ರದ ಸೇವಾ ಸಮಿತಿಯ ಸ್ಥಾಪಕಾಧ್ಯಕ್ಷ ಶೇಖರ್‌ ಇಂದು ಸಾಲ್ಯಾನ್‌ ಕಟಪಾಡಿ ಅವರ ಮುಂದಾಳತ್ವದಲ್ಲಿ ನೆರವೇರಿತು.

Advertisement

ಅಶ್ವತ್ತದಡಿ ಗರಡಿಯಲ್ಲಿ ಶುಕ್ರವಾರ ಅಪರಾಹ್ನ ಕಲಶ ಪ್ರತಿಷ್ಠೆಗೈದು ವಿಧಿವತ್ತಾಗಿ ವಾರ್ಷಿಕ ನೇಮೋತ್ಸವಕ್ಕೆ ಚಾಲನೆ ನೀಡಲಾಯಿತು. ರಾತ್ರಿ ಅಗೆಲು ತಂಬಿಲ, ನಂತರ ಬೈದರ್ಕಳ ದರ್ಶನ ನಡೆಯಿತು. ಶನಿವಾರ ಪ್ರಾತಃಕಾಲದಿಂದ ಗಣಹೋಮ, ದುರ್ಗಾಪೂಜೆ ಮಧಾಹ್ನ ಅನ್ನಸಂತಾರ್ಪಣೆ, ರಾತ್ರಿ ಬೈದರ್ಕಳ ನೇಮೋತ್ಸವ, ಜೋಗಿ ಪುರುಷರ ನೇಮೋತ್ಸವ ಮತ್ತು ಮಾಯಂದಾಲ್‌ ನೇಮ ಜರಗಿತು.

ಸುಕುಮಾರ್‌ ಭಟ್‌ ಬೈಕಲ ಅವರ ಪೌರೋಹಿತ್ಯದಲ್ಲಿ ಪೂಜಾದಿಗಳು ನೆರವೇರಿದವು. ಅರ್ಚಕರಾಕೇಶ್‌ ಶಾಂತಿ ಪೂಜಾದಿಗಳಲ್ಲಿ ಸಹಕರಿಸಿ ಭಕ್ತರಿಗೆ ತೀರ್ಥ ಪ್ರಸಾದ ನೀಡಿ ಹರಸಿದರು. ಜ. 26 ರಂದು ಮುಂಜಾನೆ ನೇಮೋತ್ಸವ ಸಮಾಪನ ಕಂಡಿತು.

ಧಾರ್ಮಿಕ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ಗೌರವಾಧ್ಯಕ್ಷ ಮತ್ತು ಭಾರತ್‌ ಬ್ಯಾಂಕಿನ ಕಾರ್ಯಾಧ್ಯಕ್ಷ ಜಯ ಸಿ. ಸುವರ್ಣ ಅವರು ಪ್ರಧಾನ ಅಭ್ಯಾಗತರಾಗಿದ್ದು ಸೂಡಾ ಗರಡಿಯ ಕೋಟಿ ಪೂಜಾರಿ ಇವರನ್ನು ಸಮ್ಮಾನಿಸಿ ಗೌರವಿಸಿದರು. ಈ ಸಂದರ್ಭದಲ್ಲಿ ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಅಧ್ಯಕ್ಷ ಚಂದ್ರಶೇಖರ ಎಸ್‌. ಪೂಜಾರಿ, ಉಪಾಧ್ಯಕ್ಷ ಶ್ರೀನಿವಾಸ ಆರ್‌. ಕರ್ಕೇರ, ಗೌರವ ಪ್ರಧಾನ ಕೋಶಾಧಿಕಾರಿ ರಾಜೇಶ್‌ ಜೆ. ಬಂಗೇರ, ಭಾರತ್‌ ಬ್ಯಾಂಕಿನ ನಿರ್ದೇಶಕ ಪ್ರೇಮನಾಥ್‌ ಪಿ. ಕೋಟ್ಯಾನ್‌, ಸ್ಥಳಿಯ ನಗರ ಸೇವಕ ಅಸ್ವಾರಿ ಪಾಟೀಲ್‌, ಶಿವಸೇನಾ ಧುರೀಣ ರಾಜಭಾಯ್‌ ಕದಂ, ಮಾಜಿ ನಗರ ಸೇವಕರುಗಳಾದ ಯೋಗೇಶ್‌ ಬೊಯಿರ್‌, ಚೇತನ್‌ ಕದಂ ಸೇರಿದಂತೆ ಮಹಾನಗರದ ಸಾವಿರಾರು ಭಕ್ತಾಭಿಮಾನಿಗಳು ಆಗಮಿಸಿ ಶ್ರೀ ಜಗದಿಶ್ವರಿ ಮತ್ತು ಬ್ರಹ್ಮಬೈದರ್ಕಳರ ಕೃಪೆಗೆ ಪಾತ್ರರಾದರು.

ಪ್ರಸಾದ್‌ ಕಲ್ಯ ಮುಲುಂಡ್‌ ಇವರು ದೇವಿ ಪಾತ್ರಿಯಾಗಿ, ನರ್ಸಪ್ಪ ಕೆ. ಮಾರ್ನಾಡ್‌ ಮಧ್ಯಸ್ಥರಾಗಿ, ಸೂಡಾ ಗರಡಿಯ ಕೋಟಿ ಪೂಜಾರಿ ಮತ್ತು ಕಿದಿಯೂರು ಗರಡಿಯ ಹರಿ ಪೂಜಾರಿ ಬೈದರ್ಕಳರ ಪೂಜಾರಿಗಳಾಗಿ ಸಹಕರಿಸಿದರು. ಬೂಬ ಪರವ, ನರಸಿಂಹ ಪರವ ಮತ್ತು ಗುಂಡು ಪರವ ಕೋಲ ನೇರವೇರಿಸಿದರು.

Advertisement

ಹರೀಶ್‌ ಕೋಟ್ಯಾನ್‌ ಮತ್ತು ಹರಿಣಾಕ್ಷಿ ಬಳಗದ ವಾಲಗ, ವಾದ್ಯದೊಂದಿಗೆ ನೇಮೋತ್ಸವ ಜರಗಿತು. ಈ ಸಂದರ್ಭದಲ್ಲಿ ಜಗದೀಶ್ವರಿ ಸೇವಾ ಸಮಿತಿಯ ಉಪಾಧ್ಯಕ್ಷ ಲಕ್ಷ್ಮಣ ಬಿ. ಬೆಳುವಾಯಿ, ಗೌರವ ಕಾರ್ಯದರ್ಶಿ ವಿಶ್ವನಾಥ ಬಿ. ಬಂಗೇರ, ಗೌರವ ಪ್ರಧಾನ ಕೋಶಾಧಿಕಾರಿ ರಘು ಕೆ. ಕೋಟ್ಯಾನ್‌, ಜತೆ ಕಾರ್ಯದರ್ಶಿ ಸದಾಶಿವ ಡಿ. ಸಾಲ್ಯಾನ್‌, ಜತೆ ಕೋಶಾಧಿಕಾರಿ ದಿನೇಶ್‌ ಆರ್‌. ಶೆಟ್ಟಿ,

ವಿಶ್ವಸ್ಥ ಸದಸ್ಯರುಗಳಾದ ನರ್ಸಪ್ಪ ಕೆ. ಮಾರ್ನಾಡ್‌, ವಾಸು ಕೆ. ಪೂಜಾರಿ, ಜಯರಾಮ ಎಸ್‌. ಪೂಜಾರಿ, ಆನಂದ್‌ ಜಿ. ಶೆಟ್ಟಿ, ದಿನಕರ್‌ ಜಿ. ಪವಾರ್‌, ಕಾರ್ಯಕಾರಿ ಸಮಿತಿಯ ಅಧ್ಯಕ್ಷ ದಯಾನಂದ ಪೂಜಾರಿ ವಾರಂಗ, ಕಾರ್ಯದರ್ಶಿಗಳಾದ

ಜಯರಾಮ ಪೂಜಾರಿ ಮತ್ತು ಲಕ್ಷ್ಮಣ್‌ ಎಸ್‌. ಸಾಲ್ಯಾನ್‌, ಜತೆ ಕಾರ್ಯದರ್ಶಿ ವಿಠಲ ಎಚ್‌. ಪೂಜಾರಿ, ಕಾರ್ಯಕಾರಿ ಸಮಿತಿಯ ಸದಸ್ಯರು ಸೇರಿದಂತೆ ಅಪಾರ ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು. ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ಸೇವಾದಳವು ದಳಪತಿ ಗಣೇಶ್‌ ಕೆ. ಪೂಜಾರಿ ನೇತೃತ್ವದಲ್ಲಿ ಸ್ವಯಂಸೇವಕರಾಗಿ ಸಹಕರಿಸಿದರು.

 

 ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್

Advertisement

Udayavani is now on Telegram. Click here to join our channel and stay updated with the latest news.

Next