Advertisement

ಯುಪಿ : ಬರ್ತ್ ಡೇ ಪಾರ್ಟಿಯಲ್ಲಿ ಗುಂಡು ತಗುಲಿ ಬಾಲಕ ಸಾವು

05:50 PM Apr 02, 2022 | Team Udayavani |

ಬಿಜ್ನೋರ್ : ಇಲ್ಲಿ ಹುಟ್ಟುಹಬ್ಬದ ಪಾರ್ಟಿಯಲ್ಲಿ ನಡೆದ ಜಗಳದ ವೇಳೆ ಗುರಿ ತಪ್ಪಿದ ಬುಲೆಟ್ ನುಗ್ಗಿ 10 ವರ್ಷದ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.

Advertisement

ಮೃತಪಟ್ಟ ಬಾಲಕ  ಜುನೈದ್ ಎನ್ನುವವನಾಗಿದ್ದು, ಇಕ್ರಮ್ ಅವರ ಪುತ್ರ ಅರ್ಮಾನ್  ಹುಟ್ಟುಹಬ್ಬದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾಗ ಶುಕ್ರವಾರ ಈ ಘಟನೆ ನಡೆದಿದೆ.

ಪಾರ್ಟಿಯಲ್ಲಿ ಆಕಿಬ್, ಇಮ್ರಾನ್ ಮತ್ತು ವಾಸಿ ನಡುವೆ ವಾಗ್ವಾದ ನಡೆಡಿದ್ದು, ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಬಂದೂಕಿನಿಂದ ಗುಂಡು ಹಾರಿಸಲಾಗಿದೆ. ಗುರಿ ತಪ್ಪಿದ ಗುಂಡು ಜುನೈದ್‌ಗೆ ತಗುಲಿ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next