Advertisement

ನದಿಗೆ ಹಾರಿದ ಯುವಕ : ರಕ್ಷಣೆಗೆ ಬಾರದ ಇಲಾಖೆ ವಿರುದ್ಧ ಸಾರ್ವಜನಿಕರಿಂದ ಆಕ್ರೋಶ

02:18 PM Sep 18, 2021 | Team Udayavani |

ಕೊಟ್ಟಿಗೆಹಾರ : ಮಾಗುಂಡಿಯ ಭದ್ರಾನದಿ ಸೇತುವೆಯಿಂದ ವಿಕಲಚೇತನ ಯುವಕನೊಬ್ಬ ನದಿಗೆ ಹಾರಿದ್ದು ಯುವಕನ ರಕ್ಷಣಾ ಕಾರ್ಯಾಚರಣೆ ಆರಂಭಿಸದ ಪೋಲಿಸ್ ಇಲಾಖೆ ಹಾಗೂ ಜಿಲ್ಲಾಡಳಿತದ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

Advertisement

ಗಬ್ಗಲ್ ಸಮೀಪದ ಬೀರ್ಗೂರು ಗ್ರಾಮದ ಸದಾನಂದ ನಾಯಕ್ (35) ಸೆ.17 ರ ಶುಕ್ರವಾರ ಸಂಜೆ 5-30 ರ ಸುಮಾರಿಗೆ ನದಿಗೆ ಹಾರಿದ್ದಾರೆ ಎನ್ನಲಾಗಿದ್ದು ಸೇತುವೆ ಮೇಲೆ ಸದಾನಂದ ನಾಯಕ್ ಅವರ ತ್ರಿಚಕ್ರ ವಾಹನ ಪತ್ತೆಯಾಗಿದೆ.

ಕೂಡಲೇ ಸ್ಥಳೀಯರು ಬಾಳೆಹೊನ್ನೂರು ಹಾಗೂ ಬಾಳೂರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ‌. ಮಾಗುಂಡಿ ಸೇತುವೆ ಅರ್ದಭಾಗ ಬಾಳೆಹೊನ್ನೂರು ಠಾಣೆಗೂ ಇನ್ನರ್ದ ಭಾಗ ಬಾಳೂರು ಠಾಣೆಗೂ ಬರುವುದರಿಂದ ಠಾಣಾ ಸರಹದ್ದಿನ ಗೊಂದಲದಿಂದಾಗಿ ಶನಿವಾರ ಮಧ್ಯಾಹ್ನದವರೆಗೂ ನದಿಯಲ್ಲಿ ಹುಡುಕಾಟ ನಡೆಸುವ ಕಾರ್ಯಚರಣೆ ಪ್ರಾರಂಭವಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯಿತು.

ಶನಿವಾರ 2 ಗಂಟೆ ಸುಮಾರಿಗೆ ಅಗ್ನಿಶಾಮಕ ದಳ ಭದ್ರಾ ನದಿಗೆ ಬಂದಿದ್ದು ಇನ್ನಷ್ಟೆ ಕಾರ್ಯಾಚರಣೆ ನಡೆಯಬೇಕಿದೆ.

ಇದನ್ನೂ ಓದಿ :ಸಾಲ ಬಾಧೆ ತಾಳಲಾರದೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ದಂಪತಿ

Advertisement
Advertisement

Udayavani is now on Telegram. Click here to join our channel and stay updated with the latest news.

Next