Advertisement

ಬಸ್ಸಿನಿಂದ ಬಿದ್ದು ಬಾಲಕನಿಗೆ ಗಾಯ

08:48 PM Mar 25, 2023 | Team Udayavani |

ಕುಂದಾಪುರ: ಇಲ್ಲಿನ ಸಂಗಮ್‌ ಜಂಕ್ಷನ್‌ ಬಳಿ ಖಾಸಗಿ ಬಸ್‌ ಚಾಲಕನ ನಿರ್ಲಕ್ಷéದಿಂದಾಗಿ ಇಳಿಯುವ ವೇಳೆ ಯಾವುದೇ ಸೂಚನೆ ಕೊಡದೇ ಚಲಾಯಿಸಿದ ಪರಿಣಾಮ 10 ವರ್ಷದ ಬಾಲಕ ಪವನ್‌ ಎಂಬಾತ ಕೆಳಕ್ಕೆ ಬಿದ್ದು ಗಾಯಗೊಂಡ ಘಟನೆ ಮಾ. 24ರಂದು ಬೆಳಗ್ಗೆ 11.45 ರ ಸುಮಾರಿಗೆ ಸಂಭವಿಸಿದೆ.

Advertisement

ಗಾಯಗೊಂಡ ಪವನ್‌ನನ್ನು ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಸ್‌ ಚಾಲಕ ಸುರೇಂದ್ರನ ವಿರುದ್ಧ ಕುಂದಾಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next