ಚೆನ್ನೈ : ಎಐಎಡಿಎಂಕೆ ಸಂಯೋಜಕ ಮತ್ತು ತಮಿಳುನಾಡು ಮಾಜಿ ಮುಖ್ಯಮಂತ್ರಿ ಓ ಪನ್ನೀರ್ ಸೆಲ್ವಂ ಮೇಲೆ ಗುರುವಾರ ನಡೆದ ಪಕ್ಷದ ಸಾಮಾನ್ಯ ಸಮಿತಿ ಸಭೆಯಲ್ಲಿ ಬಾಟಲಿಗಳನ್ನು ಎಸೆಯಲಾಗಿದೆ.
ಶ್ರೀವಾರು ವೆಂಕಟಾಚಲಪತಿ ಪ್ಯಾಲೇಸ್ ನಲ್ಲಿ ನಡೆದ ಸಭೆಯಲ್ಲಿ ಈ ಘಟನೆ ನಡೆದಿದೆ. ಪನ್ನೀರ್ ಸೆಲ್ವಂ ಬೆಂಬಲಿಗರೊಂದಿಗೆ ಪ್ರತಿಭಟನೆ ನಡೆಸಿ ಸಭೆಯಿಂದ ಅರ್ಧದಲ್ಲೇ ಹೊರನಡೆಡಿದ್ದಾರೆ.
ಎಐಎಡಿಎಂಕೆ ಸಭೆಯಲ್ಲಿ ಹೈ ಡ್ರಾಮಾ ನಡೆದಿದ್ದು, ಜುಲೈ 11 ರಂದು ಮತ್ತೊಮ್ಮೆ ಏಕ ನಾಯಕತ್ವಕ್ಕಾಗಿ ಸದಸ್ಯರ ಬೇಡಿಕೆಯನ್ನು ಚರ್ಚಿಸಲು ಜುಲೈ 11 ರಂದು ಪಕ್ಷದ ಸಾಮಾನ್ಯ ಮಂಡಳಿ ಸಭೆಯನ್ನು ಕರೆಯುವುದಾಗಿ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಗುರುವಾರ ನಡೆದ ಪಕ್ಷದ ಸಾಮಾನ್ಯ ಸಭೆಯಲ್ಲಿಎಐಎಡಿಎಂಕೆ ಪ್ರೆಸಿಡಿಯಂ ಅಧ್ಯಕ್ಷರಾಗಿ ಅಮಿಲ್ ಮಗನ್ ಹುಸೇನ್ ಅವರನ್ನು ಆಯ್ಕೆ ಮಾಡಲಾಯಿತು. ಅವರು ಇಲ್ಲಿಯವರೆಗೆ ಹಂಗಾಮಿ ಪ್ರೆಸಿಡಿಯಂ ಅಧ್ಯಕ್ಷರಾಗಿದ್ದರು.