Advertisement

ಬೇಸರವಾಗಿದೆ, ಆದರೆ ಅಸಮಾಧಾನವಿಲ್ಲ

06:15 AM Jun 09, 2018 | Team Udayavani |

ಬೆಳಗಾವಿ: ನನಗೆ ಮಂತ್ರಿ ಸ್ಥಾನ ಕೊಡುವುದಾಗಿ ಪಕ್ಷದ ಹಿರಿಯರು ಭರವಸೆ ಕೊಟ್ಟಿದ್ದರು. ಆದರೆ, ಯಾವ
ಕಾರಣಕ್ಕೆ ತಮ್ಮ ಹೆಸರನ್ನು ಕೊನೇ ಕ್ಷಣದಲ್ಲಿ ಕೈ ಬಿಡಲಾಯಿತು ಎಂಬುದು ಈಗಲೂ ಅರ್ಥವಾಗುತ್ತಿಲ್ಲ
ಎಂದು ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಮತ್ತೂಮ್ಮೆ ಅಸಮಾಧಾನ ಹೊರಹಾಕಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, “ಕೊನೆಯ ಕ್ಷಣದಲ್ಲಿ ತಮ್ಮ ಹೆಸರು ಕೈಬಿಟ್ಟಿದ್ದಕ್ಕೆ ಬೇಸರವಾಗಿದೆ. ಆದರೆ ಅಸಮಾಧಾನವಿಲ್ಲ. ನಾಲ್ವರು ಮಹಿಳಾ ಶಾಸಕಿಯರ ಪೈಕಿ ನಾನು ಹಿರಿಯವಳಾಗಿದ್ದು, ಪಕ್ಷದ ಸಂಘಟನೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಂಡಿದ್ದೆ. ಹೀಗಾಗಿ ಮಹಿಳಾ ಕೋಟಾದಲ್ಲಿ ತಮಗೆ ಸಚಿವ ಸ್ಥಾನ ಸಿಗಬಹುದೆಂಬ ವಿಶ್ವಾಸ ಇತ್ತು. ಆದರೆ ಏಕಾಏಕಿ ಎಂಎಲ್‌ಸಿ ಆಗಿರುವ ಜಯಮಾಲಾ ಅವರಿಗೆ ಮಂತ್ರಿ ಪದವಿ ಕೊಟ್ಟಿದ್ದು ಅಚ್ಚರಿ ಮೂಡಿಸಿತು. 
ನನಗೆ ಸಚಿವ ಸ್ಥಾನ ಸಿಗದಿದ್ದರೂ ಶಾಸಕಿಯಾಗಿ ಜನಪರ ಕೆಲಸ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಸುಮ್ಮನೇ ಕೂರುವುದಿಲ್ಲ. ಹಾಗೆಯೇ ಕುಳಿತುಕೊಳ್ಳುವ ಜಾಯಮಾನವೂ ನನ್ನದಲ್ಲ’ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next