Advertisement

ಗ್ರಾಮೀಣ ಭಾಷೆಯ ಸೊಗಡಿನ “ಸಾಮಾನ್ಯರಲ್ಲಿ ಅಸಾಮಾನ್ಯರು’

12:06 AM Nov 16, 2020 | mahesh |

ಈ ಅಂಕಣ ರಾಜ್ಯೋತ್ಸವ ವಿಶೇಷ. ರಾಜ್ಯದ ಯುವ ಬರಹಗಾರರು ಒಂದು ಕನ್ನಡದ ಕೃತಿ ಕುರಿತು ಬರೆಯುತ್ತಾರೆ. ಇದು ಒಂದು ರೀತಿಯಲ್ಲಿ ಓದುವ ಪಂದ್ಯ.

Advertisement

ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ಅವರ “ಸಾಮಾನ್ಯರಲ್ಲಿ ಅಸಾ ಮಾನ್ಯರು’ ಎಂಬ ವಿಶಿಷ್ಟ ಹೆಸರಿನ ಕೃತಿ ಉತ್ತರ ಕರ್ನಾಟಕದ ಗ್ರಾಮೀಣ ಭಾಷೆಯ ಸೊಗಡಿನೊಂದಿಗೆ ನಮ್ಮ ಮನಸ್ಸನ್ನು ಸೆಳೆಯುತ್ತದೆ. ಇದೊಂದು ಲೇಖನಗಳ ಸಂಕಲನವಾಗಿದ್ದು, ಹಲವು ಕಾರಣಗಳಿಂದ ಮನಸ್ಪರ್ಶಿಯಾಗುತ್ತದೆ. ಇದರಲ್ಲಿ ಉತ್ತರ ಕರ್ನಾಟಕದ ಜನರ ಪ್ರೇಮ, ಪರೋಪಕಾರ, ಅಂತಃಕರಣ ಮತ್ತು ವಾತ್ಸಲ್ಯವನ್ನು ಮನಸ್ಸಿಗೆ ತಟ್ಟುವಂತೆ, ಕಣ್ಣೆ ದುರು ನಿಲ್ಲುವಂತೆ ಓದು ಗರಿಗೆ ನೀಡುವಲ್ಲಿ ಲೇಖಕಿ ಸಫ‌ಲರಾಗಿದ್ದಾರೆ.

ಗ್ರಾಮೀಣ ಸೊಗಡಿನ ಭಾಷಾ ಶೈಲಿಯ ಮೂಲಕ ಹಲವು ವ್ಯಕ್ತಿ ಚಿತ್ರಣಗಳನ್ನು ಈ ಕೃತಿಯಲ್ಲಿ ಲೇಖಕಿ ನಮಗೆ ನೀಡಿದ್ದಾರೆ. ಕೃತಿಯನ್ನು ಓದುತ್ತಾ ಹೋದಂತೆ, ಉತ್ತರ ಕರ್ನಾಟಕದ ಜನರು ಆರ್ಥಿಕವಾಗಿ ಹಿಂದುಳಿದ್ದರೂ ಪ್ರೀತಿ, ವಾತ್ಸಲ್ಯ, ಕನ್ನಡಾಭಿ ಮಾನದಲ್ಲಿ ಶ್ರೀಮಂತಿಕೆ ಹೊಂದಿದವರು ಎಂಬುದು ಸ್ಪಷ್ಟವಾಗುತ್ತದೆ.

ಇಡೀ ಕೃತಿಯಲ್ಲಿ ಹೆಚ್ಚು ಸೆಳೆದದ್ದು “ಬಂಡಲ್‌ ಬಿಂದಪ್ಪ’ನ ಕುರಿತಾದ ಲೇಖನ. ಈತನ ಕನ್ನಡ ಪ್ರೇಮ ಹಾಗೂ ಇವನಿಗಿರುವ ಅಡ್ಡ ಹೆಸರಿನ ಒಳಹೊಕ್ಕಂತೆ ಅಲ್ಲೊಂದು ಸಾಮಾನ್ಯರ ನಡುವಿನ ಅಸಾಮಾನ್ಯನ ದರ್ಶನವಾಗುತ್ತದೆ.

ಲೇಖಕಿ ಬಿಂದಪ್ಪ ಅವರ ಮನೆಯನ್ನು ಹುಡುಕುತ್ತಾ ಹೋಗುತ್ತಿದ್ದಾಗ “ಕೀರ್ತಿ ಸ್ಟೋರ್‌’ ಹೆಸರಿನ ಅಂಗಡಿ ಸಿಗುತ್ತದೆ. ಅಂಗಡಿಯವನ ಬಳಿಗೆ ಹೋಗಿ ಕೇಳಿದಾಗ ಬಿಂದಪ್ಪನ ಬಗ್ಗೆ ವಿಚಾರಿಸಿದರು. ಆಗ ಅಂಗಡಿ ಯವನು, “ಇಲ್ಲಿ ಬಿಂದಪ್ಪ ಎನ್ನುವವರು ಹಲವರಿದ್ದಾರೆ. ನಿಮಗೆ ಯಾವ ಬಿಂದಪ್ಪ ಬೇಕು ಎಂಬುದು ತಿಳಿಯುತ್ತಿಲ್ಲ’ ಎನ್ನುತ್ತಾರೆ. ಆಗ ತನಗೆ ಬೇಕಾದ ಬಿಂದಪ್ಪನ ಬಗ್ಗೆ ಪೂರಕ ಮಾಹಿತಿಯಾಗಿ, “ಆತನ ಹೆಂಡತಿ ಸರಸ್ವತಿ, ಸಾಲ್ಯಾಗ ಟೀಚರ್‌ ಇದ್ದಾರೆ’ ಎನ್ನುತ್ತಾರೆ. ಕೂಡಲೇ ಅಂಗಡಿಯವನು, “ಮೊದಲೆ ಹೇಳಬೇಕಲ್ವಾ ಬಂಡಲ್‌ ಬಿಂದಪ್ಪ ಅಂತಾ! ಇಷ್ಟು ಮಾತುಕತೆನೇ ಬೇಕಾಗಿರಲಿಲ್ಲ’ ಎಂದರು. ಲೇಖಕಿಗೆ ಬಿಂದಪ್ಪನ ಅಡ್ಡ ಹೆಸರು ಹಾಗೂ ಆತನ ಜತೆಗಿದ್ದ “ಪಾಟೀಲ್‌’ ಬದಲು “ಬಂಡಲ್‌’ ಸೇರಿ ಅದೆಷ್ಟು ಪ್ರಭಾವಿಯಾಗಿದೆ ಎಂದು ತಿಳಿದು ಅಚ್ಚರಿಪಟ್ಟರು.

Advertisement

ಲೇಖಕಿ ಬಿಂದಪ್ಪನ ಬಗ್ಗೆ ಬಹಳ ಸುಂದರವಾಗಿ ಚಿತ್ರಿಸಿದ್ದಾರೆ. ಬಿಂದಪ್ಪ ಯಾವಾಗಲೂ ಸುಳ್ಳುಗಾರನಾಗಿದ್ದರಿಂದಲೇ ಆತನ ಹೆಸರಿನ ಜತೆಗೆ ಬಂಡಲ್‌ ಸೇರಿದೆ. ಆದರೆ ಅವನ ಬಾಯಿಯಿಂದ ಯಾವ ತ್ತಿಗೂ ನಕಾರಾತ್ಮಕ ಉತ್ತರ ಬಂದೇ ಇಲ್ಲ. ಅವನ ಮಾತುಗಳನ್ನು ನಂಬುವಂತಿ ರಲಿಲ್ಲ. ಆದರೂ ಸುಂದರ ವಾಗಿ ಇತಿಹಾಸ ಜೋಡಿಸಿ ಹೇಳುವ ಮಾತು ಮತ್ತೆ ಮತ್ತೆ ಕೇಳಬೇಕು ಎಂದನ್ನಿಸು ವುದು ಲೇಖನದಲ್ಲಿ ಪ್ರತಿ ಬಿಂಬಿತವಾಗಿದೆ.

“ಎಳೆಯರು ಎತ್ತಲ್ಲ ದಳವಾಯಿ ದೊರೆಯಲ್ಲ, ಮನೆಗೆ ಬಂದ ಅಳಿಯ ಮಗನಲ್ಲ, ಅಳಿಯ ಎಂದೂ ಮಗನಾಗು ವುದಿಲ್ಲ’ ಮುಂತಾದ ಆತನ ಮಾತುಗಳಿಂದ ಲೇಖಕಿ ಬಹಳ ಪ್ರಭಾವಿತರಾಗಿದ್ದನ್ನು ಲೇಖನದಲ್ಲಿ ಬಣ್ಣಿಸಿದ್ದಾರೆ. ಬಂಡಲ್‌ ಬಿಂದಪ್ಪನ ಕನ್ನಡಪ್ರೇಮದ ಬಗ್ಗೆಯೂ ಲೇಖಕಿ ಹಾಡಿ ಹೊಗಳಿದ್ದಾರೆ. ಬಿಂದಪ್ಪ ಮನೆ ಕಟ್ಟಲಿಲ್ಲ, ಆಸ್ತಿ ಮಾಡಿಲ್ಲ, ಯಾವುದೇ ಸಮ್ಮಾನ – ಪ್ರಶಸ್ತಿ ಸ್ವೀಕರಿಸಿಲ್ಲ. ಕೇವಲ ಕನ್ನಡಕ್ಕಾಗಿಯೇ ದುಡಿದು ಕಾನನದಲ್ಲಿ ಅರಳಿದ ಹೂವಿನಂತಿದ್ದ.

ಲೇಖಕಿ ಎಲ್ಲಿಯೇ ಇದ್ದರೂ “ಹಚ್ಚೇವು ಕನ್ನಡದ ದೀಪ’ ಹಾಡು ಕೇಳಿದಾಗ ಬಿಂದಪ್ಪನನ್ನು ಸ್ಮರಿಸುತ್ತಾರೆ. ಇದರ ಜತೆಗೆ ಕಂಡಕ್ಟರ್‌ ಭೀಮಣ್ಣ, ಅಂಗಡಿ ಜಯಣ್ಣ, ಸಿರಿವಂತ ಸೀತಾಬಾಯಿ ಮುಂತಾದ ಹಲವಾರು ಪಾತ್ರಗಳು ಈ ಸಂಕಲನದಲ್ಲಿವೆ. ಇವೆಲ್ಲವೂ ಬೇರೆ ಬೇರೆ ಕಾರಣಗಳಿಂದ ನೆನಪಿನ ಪಟಲದಲ್ಲುಳಿಯುತ್ತವೆ.


ಮಲಿಕ್‌ ಎಲ್‌. ಜಮಾದಾರ್‌, ವಿಜಯಪುರ

Advertisement

Udayavani is now on Telegram. Click here to join our channel and stay updated with the latest news.

Next