Advertisement

ಆರ್ಯನ್‌ ಪಿತೂರಿ ಮಾಡಿಲ್ಲ: ಬಾಂಬೆ ಹೈಕೋರ್ಟ್‌

07:00 PM Nov 20, 2021 | Team Udayavani |

ಮುಂಬೈ: “ಹೈ ಪ್ರೊಫೈಲ್‌ ಡ್ರಗ್ಸ್‌ ಪ್ರಕರಣದ ಆರೋಪಿಯಾಗಿರುವ ಶಾರೂಖ್‌ ಖಾನ್‌ ಮಗ ಆರ್ಯನ್‌ ಖಾನ್‌ ಇತರೆ ಆರೋಪಿಗಳೊಂದಿಗೆ ಸೇರಿಕೊಂಡು ಪಿತೂರಿ ನಡೆಸಿದ್ದಾರೆ ಎನ್ನುವುದಕ್ಕೆ ಯಾವುದೇ ಬಲವಾದ ಸಾಕ್ಷ್ಯಾಧಾರವಿಲ್ಲ’ ಎಂದು ಬಾಂಬೆ ಹೈ ಕೋರ್ಟ್‌ ಹೇಳಿದೆ. ಅ. 28ರಂದು ಆರ್ಯನ್‌ಗೆ ನೀಡಲಾಗಿರುವ ಜಾಮೀನಿನ ವಿವರ ಪ್ರತಿ ಶನಿವಾರ ಹೊರಬಿದ್ದಿದ್ದು, ಅದರಲ್ಲಿ ಈ ಅಂಶ ಹೇಳಲಾಗಿದೆ.

Advertisement

“ಆರೋಪಿಗಳಾಗಿರುವ ಆರ್ಯನ್‌, ಅರ್ಬಾಜ್‌ ಮತ್ತು ಮುನ್ಮುನ್‌ ಒಂದೇ ಹಡಗಿನಲ್ಲಿದ್ದರು ಎನ್ನುವ ಕಾರಣಕ್ಕೆ ಅವರು ಅಕ್ರಮ ವ್ಯವಹಾರ ನಡೆಸಲು ಪಿತೂರಿ ಹಾಕಿಕೊಂಡಿದ್ದರು ಎನ್ನಲಾಗದು. ಅವರ ವಾಟ್ಸ್‌ಆ್ಯಪ್‌ ಚಾಟ್‌ನಲ್ಲಿ ಆಕ್ಷೇಪಾರ್ಹ ಎನ್ನಬಹುದಾದ ಯಾವುದೇ ಅಂಶ ಕಂಡುಬಂದಿಲ್ಲ. ತಪ್ಪೊಪ್ಪಿಕೊಂಡಿದ್ದಾರೆ ಎಂದ ಮಾತ್ರಕ್ಕೆ ಪಿತೂರಿ ಮಾಡಿದ್ದಾರೆ ಎನ್ನಬಾರದು’ ಎಂದು ನ್ಯಾಯಾಲಯ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next