Advertisement

ಇನ್ಮುಂದೆ ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ !

01:31 PM Oct 17, 2021 | Team Udayavani |

ಮುಂಬೈ: ಡ್ರಗ್ಸ್‌ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ, ಬಾಲಿವುಡ್‌ ನಟ ಶಾರುಖ್‌ ಖಾನ್‌ ಪುತ್ರ ಆರ್ಯನ್‌ ಖಾನ್‌ಗೆ ಶನಿವಾರ, ಎನ್‌ಸಿಬಿ ಕಚೇರಿಯಲ್ಲಿ ಆಪ್ತ ಸಮಾಲೋಚನೆ ನಡೆಸಲಾಯಿತು. ಈ ವೇಳೆ, ಆರ್ಯನ್‌ಗೆ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ವಿವರಿಸಲಾಯಿತು.

Advertisement

ಅಧಿಕಾರಿಗಳು, ತಜ್ಞರು ನೀಡಿದ ಸಲಹೆ ಸ್ವೀಕರಿಸಿದ ಆರ್ಯನ್‌, ಮುಂದೆ ತನ್ನೆಲ್ಲಾ ದುಶ್ಚಟಗಳನ್ನು ಬಿಡುವುದಾಗಿ ವಾಗ್ಧಾನ ನೀಡಿದ್ದಾನೆ. ಮುಂದಿನ ದಿನಗಳಲ್ಲಿ ತಾನು ಸಮಾಜದ ಬಡವರ, ದೀನದಲಿತರ ಉದ್ಧಾರಕ್ಕಾಗಿ ಶ್ರಮಿಸುವುದಾಗಿ ತಿಳಿಸಿದ್ದಾನೆ. ಜತೆಗೆ, ಡ್ರಗ್ಸ್‌ ಪ್ರಕರಣ ಭೇದಿಸಿರುವ ಎನ್‌ಸಿಬಿ ಪ್ರಾಂತೀಯ ಆಯುಕ್ತ ಸಮೀರ್‌ ವಾಂಖೆಡೆಯವರೇ ಮುಂದೊಂದು ದಿನ ತಮ್ಮನ್ನು ಮೆಚ್ಚಿಕೊಳ್ಳುವಂಥ ಕಾರ್ಯ ಮಾಡುವುದಾಗಿ ತಿಳಿಸಿದ್ದಾನೆ ಎಂದು ಮೂಲಗಳು ತಿಳಿಸಿದೆ.

23 ವರ್ಷದ ಆರ್ಯನ್ ಪ್ರಸ್ತುತ ಮುಂಬೈನ ಆರ್ಥರ್ ರೋಡ್ ಜೈಲಿನಲ್ಲಿದ್ದಾರೆ. ಐಷಾರಾಮಿ ಕ್ರೂಸ್ ಹಡಗಿನಲ್ಲಿ ನಡೆಸಿದ ಡ್ರಗ್ಸ್ ರೇವ್ ಪಾರ್ಟಿ ಪ್ರಕರಣದಲ್ಲಿ ಆತನನ್ನು ಎನ್‌ಸಿಬಿ ಬಂಧಿಸಿದೆ. ಆರ್ಯನ್ ಹೊರತಾಗಿ ಎನ್‌ಸಿಬಿ ಇತರ 7 ಆರೋಪಿಗಳನ್ನು ಬಂಧಿಸಿದೆ. ಈ ಪೈಕಿ ಇಬ್ಬರು ಆರ್ಯನ್ ಹಳೆಯ ಸ್ನೇಹಿತರಿದ್ದಾರೆ. ಆರೋಪಿಗಳ ಪೈಕಿ ಇಬ್ಬರು ಮಹಿಳೆಯರೂ ಸೇರಿದ್ದಾರೆ. ಜೈಲಿಗೆ ಕಳುಹಿಸುವ ಮೊದಲು ಇವರೆಲ್ಲರಿಗೂ ಕೂಡ ಆಪ್ತಸಮಾಲೋಚನೆ ನಡೆಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next