Advertisement

Boliyar ಚೂರಿ ಇರಿತ ಪ್ರಕರಣ: ಇರಿತ: ಮತ್ತೋರ್ವನ ಬಂಧನ

12:35 AM Jun 12, 2024 | Team Udayavani |

ಉಳ್ಳಾಲ: ಬೋಳಿಯಾರ್‌ ಬಿಜೆಪಿ ವಿಜಯೋತ್ಸವದ ಸಂದರ್ಭದಲ್ಲಿ ಚೂರಿ ಇರಿತಕ್ಕೆ ಸಂಬಂಧಿಸಿದಂತೆ ಇನ್ನೋರ್ವ ಆರೋಪಿಯನ್ನು ಕೊಣಾಜೆ ಪೊಲೀಸರು ಬಂಧಿಸಿದ್ದು, ಘಟನೆಗೆ ಸಂಬಂಧಿಸಿದಂತೆ ಒಟ್ಟು ಆರು ಆರೋಪಿಗಳನ್ನು ಬಂಧಿಸಿದಂತಾಗಿದೆ.

Advertisement

ಬಿಜೆಪಿ ಕಾರ್ಯಕರ್ತರಾದ ಹರೀಶ್‌ ಧರ್ಮ ನಗರ ಮತ್ತು ನಂದನ್‌ಗೆ ಚೂರಿ ಇರಿಯಲಾಗಿತ್ತು. ಈ ಸಂಬಂಧ ಬೋಳಿಯಾರ್‌ನ ಶಾಕೀರ್‌(28), ಅಬ್ದುಲ್‌ ರಜಾಕ್‌(40), ಅಬೂಬಕ್ಕರ್‌ ಸಿದ್ದಿಕ್‌(35), ಸವಾದ್‌(18) ಹಾಗೂ ಹಫೀಝ್(24) ಬಂಧಿಸಲಾಗಿತ್ತು. ಬಶೀರ್‌ನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು ಒಟ್ಟು ಆರು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದೆ.

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹರೀಶ್‌ ಮತ್ತು ನಂದನ್‌ ಅವರನ್ನು ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಭರತ್‌ ಶೆಟ್ಟಿ, ಹರೀಶ್‌ ಪೂಂಜಾ, ರಾಜೇಶ್‌ ನಾೖಕ್‌ ಭೇಟಿ ನೀಡಿ ಆರೋಗ್ಯ ವಿಚಾರಿಸಿದರು. ಬೋಳಿಯಾರ್‌ನಲ್ಲಿ ಮಂಗಳವಾರವೂ ಪೊಲೀಸರ ಭದ್ರತೆ ಮುಂದು ವರಿದಿದ್ದು, ಕೆಎಸ್‌ಆರ್‌ಪಿ., ಮಂಗಳೂರು ನಗರ ಮೀಸಲು ಪಡೆ, ಮತ್ತು ಕೊಣಾಜೆ, ಉಳ್ಳಾಲ ಪೊಲೀಸರು ಬಂದೋಬಸ್ತ್ನಲ್ಲಿ ನಿರತರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next