Advertisement

ಪುರಸಭೆಯಲ್ಲಿ ಬೋಗಸ್‌ ಬಿಲ್‌: ಡಿಸಿಗೆ ದೂರು

04:09 PM Sep 23, 2022 | Team Udayavani |

ವಾಡಿ: ಪಟ್ಟಣದ ಪುರಸಭೆಯ ಕಾಂಗ್ರೆಸ್‌ ಆಡಳಿತ ಭ್ರಷ್ಟಾಚಾರದಲ್ಲಿ ಮುಳುಗಿದೆ. ಸಾಮಾನ್ಯ ಸಭೆ ಕರೆದು ಚರ್ಚಿಸದೆ ಬೇಕಾಬಿಟ್ಟಿ ಬೋಗಸ್‌ ಬಿಲ್‌ ಬರೆಯಲಾಗುತ್ತಿದೆ ಎಂದು ಆರೋಪಿಸಿದ ಪುರಸಭೆಯ ವಿರೋಧ ಪಕ್ಷ ಬಿಜೆಪಿ ಸದಸ್ಯರು, ವಿಧಾನ ಪರಿಷತ್‌ ಮಾಜಿ ಸದಸ್ಯ ಅಮರನಾಥ ಪಾಟೀಲ ನೇತೃತ್ವದಲ್ಲಿ ಗುರುವಾರ ಜಿಲ್ಲಾಧಿಕಾರಿ ಯಶವಂತ ಗುರುಕರ್‌ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದ್ದಾರೆ.

Advertisement

ಎಸಿಸಿ ಸಿಮೆಂಟ್‌ ಕಂಪನಿ ಸೇರಿದಂತೆ ನಗರದ ಸಾರ್ವಜನಿಕರಿಂದ ಸಂಗ್ರಹಗೊಳ್ಳುವ ಕೋಟ್ಯಂತರ ರೂಪಾಯಿ ತೆರಿಗೆ ಹಣ ದುರ್ಬಳಕೆಯಾಗಿದೆ. ಸರ್ಕಾರದಿಂದ ಬಂದಿರುವ ವಿವಿಧ ಯೋಜನೆಗಳ ನೂರಾರು ಕೋಟಿ ರೂ. ಅನುದಾನವನ್ನು ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಬೋಗಸ್‌ ಬಿಲ್‌ ಸೃಷ್ಠಿಸಿ ಲೂಟಿ ಮಾಡಲಾಗಿದೆ. ಈ ಕುರಿತು ಸಾಮಾನ್ಯ ಸಭೆ ಕರೆದು ಅಭಿವೃದ್ಧಿಯ ಮಾಹಿತಿ ಮತ್ತು ಲೆಕ್ಕಪತ್ರ ತೋರಿಸುವಂತೆ ಕೋರಿದರೂ ಪುರಸಭೆ ಅಧ್ಯಕ್ಷರಾಗಲಿ ಅಥವಾ ಮುಖ್ಯಾಧಿಕಾರಿಯಾಗಲಿ ಕಿವಿಗೊಡುತ್ತಿಲ್ಲ. ವಿರೋಧ ಪಕ್ಷದ ಸಲಹೆ, ಸೂಚನೆ ಮತ್ತು ಆದೇಶಗಳನ್ನು ಕಡೆಗಣಿಸಲಾಗುತ್ತಿದೆ. ಪರಿಣಾಮ ಪುರಸಭೆ ಖಜಾನೆಯ ಹಣದ ಐದು ವರ್ಷದ ಖರ್ಚು ಲೆಕ್ಕಪತ್ರ ತನಿಖೆಗೊಳಪಡಿಸಬೇಕು ಎಂದು ಆಗ್ರಹಿಸಿರುವ ಪುರಸಭೆಯ ವಿರೋಧ ಪಕ್ಷದ ನಾಯಕ, ಬಿಜೆಪಿ ಮುಖಂಡ ಭೀಮಶಾ ಜಿರೊಳ್ಳಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

ಪುರಸಭೆ ಸದಸ್ಯ ರವಿ ನಾಯಕ, ನಾಮನಿರ್ದೇಶಿತ ಸದಸ್ಯರಾದ ಕಿಶನ ಜಾಧವ, ವೀರಣ್ಣ ಯಾರಿ, ಆಶ್ರಯ ಸಮಿತಿ ಸದಸ್ಯರಾದ ಅಂಬಾದಾಸ ಜಾಧವ, ಸತೀಶ ಸಾವಳಗಿ, ಬಿಜೆಪಿ ತಾಲೂಕು ಉಪಾಧ್ಯಕ್ಷ ಗಿರಿಮಲ್ಲಪ್ಪ ಕಟ್ಟಿಮನಿ, ರಾಜು ಕೋಲಿ, ಕಿಶನ ನಾಯಕ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next