Advertisement

ಚಿಂಚೋಳಿ: ಜಲಾಶಯದಲ್ಲಿ ಮೀನು ಹಿಡಿಯಲು ಹೋಗಿ ತಂದೆ ಮಗ ಸಾವು; ಮೃತದೇಹ ಪತ್ತೆ

01:42 PM Aug 03, 2022 | Team Udayavani |

ಚಿಂಚೋಳಿ: ತಾಲೂಕಿನ ಚಂದ್ರಂಪಳ್ಳಿ ಜಲಾಶಯದಲ್ಲಿ ಮೀನು ಹಿಡಿಯಲು ಹೋದ ತಂದೆ ಮಗ ಜಲಾಶಯದಲ್ಲಿ ಸಿಲುಕಿ ಮೃತಪಟ್ಟಿದ್ದು, ಬುಧವಾರ ಮೃತದೇಹ ಪತ್ತೆಯಾಗಿದೆ.

Advertisement

ಚಂದ್ರಂಪಳ್ಳಿ ಗ್ರಾಮದ ರಾಜಪ್ಪ ತಿಮ್ಮಯ್ಯ (45) ಮತ್ತು ಆತನ ಮಗ ಮಹೇಶ್ (12) ಮೃತ ದುರ್ದೈವಿಗಳು.

ಮುಖ್ಯ ಕಾಲುವೆಯಲ್ಲಿ ಮಂಗಳವಾರ ಮುಂಜಾನೆ ಮೀನು‌ಹಿಡಿಯಲು‌‌ ಚಂದ್ರಂಪಳ್ಳಿ ಜಲಾಶಯಕ್ಕೆ ಹೋಗಿದ್ದರು. ‌ಮಧ್ಯಾಹ್ನ ಆದರೂ ‌ಮನೆಗೆ ಬಾರದೇ ಇರುವುದರಿಂದ ಆತನ ಇನ್ನೊಬ್ಬ ಮಗ ಊರಿನ ಜನರಿಗೆ‌ ತಿಳಿದ್ದಾನೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಕಾಪು: ಸಾವಿನಲ್ಲೂ ಒಂದಾದರು ಐದು ದಶಕಗಳ ಕಾಲ ಜೊತೆಯಾಗಿ ಬಾಳಿ ಬದುಕಿದ ದಂಪತಿ

ಕಾಲುವೆ ಗೇಟಿನಿಂದ ನೀರು ಹರಿಯಲು ಬಿಟ್ಟಿದ್ದರಿಂದ ನೀರಿನ ರಭಸಕ್ಕೆ ಶವಗಳು ಕಲುಷಿತ ನೀರಿನಲ್ಲಿ ಕಾಣದೆ ಇರುವುದರಿಂದ ಬುಧವಾರ ಮುಂಜಾನೆ ಕಾಲುವೆ ನೀರು ಬಂದ್ ಮಾಡಿ‌ ಶೋಧಕಾರ್ಯ ನಡೆಸಿದ್ದು, ಇಬ್ಬರ ಶವ ಪತ್ತೆಯಾಗಿದೆ.

Advertisement

ಘಟನಾ ಸ್ಥಳಕ್ಕೆ ತಹಸೀಲ್ದಾರ್ ಅಂಜುಮ್ ತಬಸ್ಸುಮ್ ಅಗ್ನಿಶಾಮಕದಳ ಚಂದ್ರಂಪಳ್ಳಿ ನೀರಾವರಿ ಯೋಜನೆಯ ಅಧಿಕಾರಿಗಳು ಭೇಟಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next