Advertisement

ಉದ್ಯಾವರ: ನಾಡದೋಣಿಯ ಹಿತ್ತಾಳೆ ರಿಂಗ್‌ ಕಳವು

11:00 AM Jul 27, 2019 | keerthan |

ಕಾಪು: ಉದ್ಯಾವರ ಪಡುಕೆರೆ ಪಂಢರೀನಾಥ ಡಿಸ್ಕೋ ಪಂಪ್‌ ಶೆಡ್‌ನ‌ ಬಳಿ ನದಿಯಲ್ಲಿ ನಿಲ್ಲಿಸಿದ್ದ ದೋಣಿಯಲ್ಲಿಡಲಾಗಿದ್ದ ಬಲೆಯ ರೋಪ್‌ ಅನ್ನು ತುಂಡು ಮಾಡಿ, ಅದಕ್ಕೆ ಅಳವಡಿಸಲಾಗಿದ್ದ ಹಿತ್ತಾಳೆ ರಿಂಗ್‌ಗಳನ್ನು ಜು. 25ರಂದು ಕಳವು ಮಾಡಲಾಗಿದೆ. ಕಳವಾಗಿರುವ 95 ಹಿತ್ತಾಳೆ ರಿಂಗ್‌ಗಳ ಮೌಲ್ಯ 45 ಸಾ. ರೂ. ಎಂದು ಅಂದಾಜಿಸಲಾಗಿದೆ.

Advertisement

ಉದ್ಯಾವರ ಸಂಪಿಗೆನಗರದ ಕೃಷ್ಣ ಜಿ. ಕೋಟ್ಯಾನ್‌ ಮತ್ತು ಇತರ 40 ಮಂದಿ ಸೇರಿ ನಾಡದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದರು. ಜು. 25ರಂದು ಮೀನುಗಾರಿಕೆ ಮುಗಿಸಿ ದೋಣಿ ಮತ್ತು ಬಲೆಯನ್ನು ನದಿ ಬದಿಯಲ್ಲಿ ಕಟ್ಟಿ ಹಾಕಿದ್ದರು. ಜು. 26ರಂದು ಬೆಳಗ್ಗೆ ಮೀನುಗಾರಿಕೆಗೆ ಹೋಗಲೆಂದು ಬಂದು ನೋಡಿದಾಗ ಕಳವು ನಡೆದಿರುವುದು ಬೆಳಕಿಗೆ ಬಂದಿತ್ತು.

ಕೃಷ್ಣ ಜಿ. ಕೋಟ್ಯಾನ್‌ ದೂರಿನಂತೆ ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next