Advertisement

ಹೆಜಮಾಡಿ: ದೋಣಿ ಮಗುಚಿ ಮೀನುಗಾರ ಸಾವು

11:19 PM Feb 24, 2023 | Team Udayavani |

ಪಡುಬಿದ್ರಿ: ಹೆಜಮಾಡಿಕೋಡಿಯಿಂದ ಮುಂಜಾನೆ ಮೂರು ಗಂಟೆಯ ವೇಳೆಗೆ ಮೀನುಗಾರಿಕೆ ಹೊರಟಿದ್ದ ನಾಡದೋಣಿಯೊಂದು ಅಳಿವೆಬಾಗಿಲಿನಲ್ಲಿ ದೊಡ್ಡ ಸಮುದ್ರದಲೆಯ ಹೊಡೆತಕ್ಕೆ ಸಿಲುಕಿ ಮುಗುಚಿ ಬಿದ್ದ ಪರಿಣಾಮ ಬೋಟಿನಲ್ಲಿದ್ದ ಹೆಜಮಾಡಿಕೋಡಿ ನಿವಾಸಿ ಪದ್ಮನಾಭ ಸುವರ್ಣ (46) ಅವರು ಸಮುದ್ರದ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ.

Advertisement

ಇನ್ನೋರ್ವ ಧೀರೇಶ್‌ ಬಂಗೇರ ಈಜಿ ದಡ ಸೇರಿದ್ದಾರೆ. ಪದ್ಮನಾಭ ಸುವರ್ಣ ಮೃತದೇಹವು ಶುಕ್ರವಾರ ಬೆಳಗ್ಗೆ ಹೆಜಮಾಡಿಕೋಡಿಯಲ್ಲಿ ಪತ್ತೆಯಾಗಿದೆ. ಪಡುಬಿದ್ರಿ ಠಾಣೆಯಲ್ಲಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next