Advertisement

ಪಶ್ಚಿಮ ಬಂಗಾಳ: ದೋಣಿ ಮುಳುಗಡೆಯಾಗಿ ಮೂವರು ಸಾವು, 30 ಕ್ಕೂ ಹೆಚ್ಚು ಜನರು ನಾಪತ್ತೆ

10:14 AM Oct 05, 2019 | Mithun PG |

ಬಿಹಾರ: ಪಶ್ಚಿಮ ಬಂಗಾಳ ಮಹಾನಂದ ನದಿಯಲ್ಲಿ ದೋಣಿ ಮುಳುಗಡೆಯಾಗಿ ಇಬ್ಬರು ಸಾವನ್ನಪ್ಪಿ,  30 ಕ್ಕೂ ಹೆಚ್ಚು ಜನರು ನಾಪತ್ತೆಯಾದ ಘಟನೆ ಬೆಳಕಿಗೆ ಬಂದಿದೆ.

Advertisement

ಗುರುವಾರ ಸಂಜೆ 7 ಗಂಟೆ ಸುಮಾರಿಗೆ ಈ ದುರ್ಘಟನೆ ನಡೆದಿದ್ದು, ದೋಣಿಯಲ್ಲಿ 60 ಜನ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ.

ಪ್ರತಿವರ್ಷ ದುರ್ಗಾ ಪೂಜೆಯ ದಿನದಂದು ಮುಕುಂದಪುರ ಘಾಟ್ ನಲ್ಲಿ ದೋಣಿ ಸ್ಪರ್ಧೆ ನಡೆಯುತ್ತಿತ್ತು. ಇದನ್ನು ವೀಕ್ಷಿಸಿದ ಜನರು ಖಾಸಗಿ ದೋಣಿಯಲ್ಲಿ ಬಿಹಾರದ ಜಗನ್ನಾಥಪುರ ಘಾಟ್ ಕಡೆ ಪ್ರಯಾಣಿಸುತ್ತಿದ್ದರು. ಈ ವೇಳೆ ದೋಣಿ ಮಗುಚಿದ ಪರಿಣಾಮ ಹಲವರು ನೀರುಪಾಲಾಗಿದ್ದಾರೆ. ಸಾಮಾರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ದೋಣಿಯಲ್ಲಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿದ್ದೆ ಘಟನೆಗೆ ಮೂಲ ಕಾರಣ ಎನ್ನಲಾಗಿದೆ.

ಇಲ್ಲಿಯವರೆಗೂ 28 ಮಂದಿಯನ್ನು ರಕ್ಷಿಸಲಾಗಿದ್ದು , ಉಳಿದವರಿಗಾಗಿ ಶೋಧಕಾರ್ಯ ನಡೆಯುತ್ತಿದೆ. ಸ್ಥಳಕ್ಕೆ ರಾಷ್ಟ್ರೀಯ ವಿಪ್ಪತ್ತು ನಿರ್ವಹಣಾ ಪಡೆ (ಎನ್ ಡಿಆರ್ ಎಫ್) ಧಾವಿಸಿದ್ದು ರಕ್ಷಣಾ ಕಾರ್ಯ ನಡೆಯುತ್ತಿದೆ.

ಕಳೆದ ತಿಂಗಳು ಆಂಧ್ರ ಪ್ರದೇಶದ  ಪೂರ್ವ ಗೋದಾವರಿ ಜಿಲ್ಲೆಯಲ್ಲಿ ಭೀಕರ ದೋಣಿ ದುರಂತ ಸಂಭವಿಸಿ 47 ಮಂದಿ ಜಲಸಮಾಧಿಯಾಗಿದ್ದರು.

Advertisement

WB: 2 people died, 7 still missing after a boat carrying them from Malda to Bihar’s Katihar, capsized in Mahananda river, earlier tonight. 28 people rescued so far. Search&rescue operation by NDRF (National Disaster Response Force) is underway. Rescued people admitted to hospital pic.twitter.com/vk45Dyk5hB

— ANI (@ANI) October 3, 2019

Advertisement

Udayavani is now on Telegram. Click here to join our channel and stay updated with the latest news.

Next