Advertisement

ಕಲ್ಲಿಗೆ ಢಿಕ್ಕಿ ಹೊಡೆದು ಬೋಟು ಮುಳುಗಡೆ 26 ಲಕ್ಷ ರೂ. ನಷ್ಟ

02:21 AM Sep 26, 2021 | Team Udayavani |

ಮಲ್ಪೆ: ಮೀನುಗಾರಿಕೆ ನಡೆಸಿ ಮರಳುತ್ತಿದ್ದ ಉದ್ಯಾವರ ಪಿತ್ರೋಡಿಯ ಅಶ್ವತ್ಥ ಕುಮಾರ್‌ ಅವರಿಗೆ ಸೇರಿದ ದತ್ತಾತ್ರೇಯ ಬೋಟು ಅಳಿವೆ ಬಾಗಿಲಿನ ಬಳಿ ಎಂಜಿನ್‌ ಕೆಟ್ಟು ಹೋದ ಪರಿಣಾಮ ಬೋಟು ನಿಯಂತ್ರಣ ತಪ್ಪಿ ಕಲ್ಲಿಗೆ ಢಿಕ್ಕಿ ಹೊಡೆದು ಸಂಪೂರ್ಣ ಹಾನಿಗೀಡಾಗಿ ಮುಳುಗಿದ ಘಟನೆ ಶುಕ್ರವಾರ ರಾತ್ರಿ ಮಲ್ಪೆ ಬಂದರು ಬಳಿ ಸಂಭವಿಸಿದೆ.

Advertisement

ಈ ಬೋಟು ಶುಕ್ರವಾರ ಮುಂಜಾನೆ 4 ಗಂಟೆಗೆ ಧರ್ಮ ಕುಂದರ್‌ ಮಾಲಕತ್ವದ ಬೋಟ್‌ನೊಂದಿಗೆ ಸಹಬೋಟ್‌ ಆಗಿ (ಕ್ಯಾರಿಯರ್‌) ಮೀನುಗಾರಿಕೆಗೆ ತೆರಳಿತ್ತು. ರಾತ್ರಿ 8 ಗಂಟೆಗೆ ವಾಪಸಾಗುತ್ತಿದ್ದಾಗ ಅವಘಡ ಸಂಭವಿಸಿದೆ. ಬೋಟಿನಲ್ಲಿದ್ದ ನಾಲ್ವರು ಮೀನುಗಾರರನ್ನು ಸಮೀಪದಲ್ಲಿದ್ದ ಶ್ರೀ ದತ್ತಾತ್ರೆಯ ಬೋಟಿನವರು ರಕ್ಷಿಸಿದ್ದಾರೆ.

ಸುಮಾರು 26 ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next