Advertisement

ಕಿವುಡ ಮತ್ತು ಮೂಕ ಮಗಳನ್ನು ನಾಲ್ಕನೇ ಮಹಡಿಯಿಂದ ಎಸೆದ ತಾಯಿ

03:12 PM Aug 05, 2022 | Team Udayavani |

ಬೆಂಗಳೂರು: ಕಿವುಡ ಮತ್ತು ಮೂಕ ಮಗಳನ್ನು ಅಪಾರ್ಟ್‌ಮೆಂಟ್‌ನ ತಮ್ಮ ನಾಲ್ಕನೇ ಮಹಡಿಯ ಬಾಲ್ಕನಿಯಿಂದ ಎಸೆದು ಕೊಂದ ಆರೋಪದ ಮೇಲೆ ಬೆಂಗಳೂರು ಪೊಲೀಸರು ದಂತ ವೈದ್ಯೆನ್ನು ಬಂಧಿಸಿದ್ದಾರೆ.

Advertisement

ಉತ್ತರ ಬೆಂಗಳೂರಿನ ಎಸ್‌ಆರ್‌ನಗರದ ಅಪಾರ್ಟ್‌ಮೆಂಟ್‌ನಲ್ಲಿ ಗುರುವಾರ ಈ ಭಯಾನಕ ಘಟನೆ ನಡೆದಿದ್ದು, ಆಕೆಯ ಪತಿ ಕಿರಣ್ ನೀಡಿದ ದೂರಿನ ಆಧಾರದ ಮೇಲೆ ಆರೋಪಿ ಸುಷ್ಮಾ ಭಾರದ್ವಾಜ್ ಅವರನ್ನು ಬಂಧಿಸಲಾಗಿದೆ.

ಘಟನೆಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಆರೋಪಿಯು ತನ್ನ ಮಗಳೊಂದಿಗೆ ಬಾಲ್ಕನಿಗೆ ಬಂದು ನಂತರ ಅವಳನ್ನು ಕೆಳಗೆ ಎಸೆದಿರುವುದನ್ನು ತೋರಿಸಿದೆ. ನಂತರ ಸುಷ್ಮಾ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಯತ್ನದಲ್ಲಿ ರೇಲಿಂಗ್ ಮೇಲೆ ಏರುತ್ತಾಳೆ ಆದರೆ ನೆರೆಹೊರೆಯವರು ರಕ್ಷಿಸಿದ್ದಾರೆ.

ಸುಷ್ಮಾ ತನ್ನ ವೃತ್ತಿ ಬೆಳವಣಿಗೆಗೆ ನಾಲ್ಕು ವರ್ಷದ ಮಗು ಅಡ್ಡಿಯಾಗಿದ್ದಾಳೆ ಎಂದು ಭಾವಿಸಿದ್ದಳು. ಇದಕ್ಕೂ ಮುನ್ನ ಮಗಳನ್ನು ರೈಲ್ವೆ ನಿಲ್ದಾಣದಲ್ಲಿ ಬಿಟ್ಟು ಹೋಗಲು ಯತ್ನಿಸಿದ್ದಳು. ಈ ವಿಷಯ ತಿಳಿದ ಕಿರಣ್ ತಕ್ಷಣ ಠಾಣೆಗೆ ಧಾವಿಸಿ ನೋಡಿದಾಗ ಅವರ ಮಗಳು ಪತ್ತೆಯಾಗಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next