Advertisement

TMCಗೆ ಹೊಡೆತ:ಪಕ್ಷ ತೊರೆದ ಹಿರಿಯ ನಾಯಕ ತಪಸ್‌ ರಾಯ್‌

01:02 AM Mar 05, 2024 | Team Udayavani |

ಕೋಲ್ಕತಾ: ಟಿಎಂಸಿಯ ಹಿರಿಯ ನಾಯಕ ತಪಸ್‌ ರಾಯ್‌ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಪಕ್ಷವನ್ನು ತೊರೆದಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಸ್ಪೀಕರ್‌ ಬಿಮನ್‌ ಬ್ಯಾನರ್ಜಿ ಅವರಿಗೆ ಸಲ್ಲಿಸಿರುವ ರಾಯ್‌ ಅವರು, ಮಾ. 1ರಂದೇ ಪಕ್ಷದ ಹಾಗೂ ಸರಕಾರದ ವಿವಿಧ ಹುದ್ದಗಳಿಗೂ ರಾಜೀನಾಮೆ ನೀಡಿದ್ದಾರೆ.

Advertisement

5 ಬಾರಿ ಶಾಸಕ ರಾಗಿರುವ ರಾಯ್‌, ಜನವರಿ 12ರಂದ ತಮ್ಮ ಮನೆ ಮೇಲೆ ಇ.ಡಿ. ದಾಳಿ ನಡೆದಾಗ ಮಮತಾ ಬ್ಯಾನರ್ಜಿ ಅವರು ಮೌನತಾಳಿದ್ದರಿಂದ ಭ್ರಮನಿರಸ‌ನವಾಗಿದೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಲೋಕಸಭೆ ಚುನಾವಣೆಯಲ್ಲಿ ಉತ್ತರ ಕೋಲ್ಕತಾದಿಂದ ಸ್ಪರ್ಧಿಸಲು ರಾಯ್‌ ಒತ್ತಡ ಹೇರುತ್ತಿದ್ದರು ಎಂದು ಟಿಎಂಸಿ ಆರೋಪಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next