Advertisement

ಶ್ರೀನಗರದಲ್ಲಿ ಹಿಮಪಾತ : ಕೊಡಗಿನ ಯೋಧ ಹುತಾತ್ಮ

01:37 AM Feb 24, 2022 | Team Udayavani |

ಮಡಿಕೇರಿ: ಶ್ರೀನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂದರ್ಭ ತೀವ್ರ ಹಿಮಪಾತಕ್ಕೆ ಸಿಲುಕಿದ ಕೊಡಗು ಜಿಲ್ಲೆಯ ಯೋಧರೊಬ್ಬರು ಹುತಾತ್ಮರಾದ ಘಟನೆ ಸಂಭವಿಸಿದೆ.

Advertisement

ವೀರಾಜಪೇಟೆಯ ಮೀನುಪೇಟೆ ಮೂಲದ ಹವಾಲ್ದಾರ್‌ ಅಲ್ತಾಫ್ ಅಹಮದ್‌ (37) ಹುತಾತ್ಮ ಯೋಧ. ಅವರು ತಾಯಿ, ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದಾರೆ.

ಈ ದುರ್ಘ‌ಟನೆಯ ಕುರಿತು ಭೂ ಸೇನೆಯ ಉನ್ನತಾಧಿಕಾರಿಗಳು ಅಲ್ತಾಫ್ ಕುಟುಂಬಕ್ಕೆ ಮಾಹಿತಿ ನೀಡಿದ್ದಾರೆ.

ಹುಲ್ಲು ವ್ಯಾಪಾರಿಯ ಪುತ್ರ ಅಲ್ತಾಫ್ ಅವರು ಹುಲ್ಲು ವ್ಯಾಪಾರಿಯಾಗಿದ್ದ ಉಮ್ಮರ್‌ ಮತ್ತು ಆಶೀಯಾ
ದಂಪತಿಯ ಪುತ್ರ. ಮೀನುಪೇಟೆಯಲ್ಲಿ ಹುಟ್ಟಿ ಬೆಳೆ ದವರು. ಬಾಲ್ಯದಿಂದಲೇ ದೇಶ ಭಕ್ತಿ  ಮೈಗೂಡಿಸಿಕೊಂಡಿದ್ದರು. ವೀರಾಜ ಪೇಟೆಯ ಸೈಂಟ್‌ ಆ್ಯನ್ಸ್‌ ಶಾಲೆಯಲ್ಲಿ 10ನೇ ತರಗತಿ ವರೆಗೂ ಸ್ಥಳೀಯ ಸರಕಾರಿ ಜೂನಿಯರ್‌ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪೂರೈಸಿ  ದೇಶ ಸೇವೆ ಮಾಡುವ ತನ್ನ ಕನಸನ್ನು ನನಸಾಗಿಸುವ ಉದ್ದೇಶದಿಂದ ಭಾರತೀಯ ಭೂ ಸೇನೆಯ ಆರ್ಮಿ ಆರ್ಡ್‌ನಾನ್ಸ್‌ ಕಾಪ್ಸ್‌ì (ಎಒಸಿ) ರೆಜಿಮೆಂಟ್‌ಗೆ ಸೇರ್ಪಡೆಯಾಗಿದ್ದರು.

19 ವರ್ಷಗಳ ಸೇವೆ
19 ವರ್ಷಗಳಿಂದ ದೇಶದ ವಿವಿಧ ಭಾಗಗಳಲ್ಲಿ ಸೇವೆ ಸಲ್ಲಿಸಿದ್ದ ಅವರು ಇತ್ತೀಚೆಗೆ ಶ್ರೀನಗರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಬುಧವಾರ ಮುಂಜಾನೆ ಗಡಿ ರಕ್ಷಣಾ ಕರ್ತವ್ಯದಲ್ಲಿದ್ದ ಸಂದರ್ಭ ಹಿಮಪಾತವಾಗಿದ್ದು ಅವರು ಅದರಡಿ ಸಿಲುಕಿದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next