Advertisement
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ತಂಡ ದೊಡ್ಡದೊಂದು ರನ್ ಪೇರಿಸಲಿಲ್ಲ. 19.4 ಓವರ್ಗಳಲ್ಲಿ ಕೇವಲ 158 ರನ್ಗಳಿಸಿ ಆಲೌಟಾಯಿತು. ಈ ಗುರಿ ಬೆನ್ನಟ್ಟಿದ ಭಾರತ ಅಬ್ಬರದ ಆಟ ಪ್ರದರ್ಶಿಸಿತು. ಆರಂಭಿಕರಾದ ಸುಖ್ರಾಮ್ ಮಾಂಜಿ (ಅಜೇಯ 67 ರನ್) ಮತ್ತು ಗಣೇಶ್ ಬಾಬುಬಾಯಿ (ಅಜೇಯ 78 ರನ್) ಗಳಿಸಿದರು.
Related Articles
ಸಮರ್ಥನಂ ಮಹಾಂತೇಶ್ ಅಧ್ಯಕ್ಷ
ಬೆಂಗಳೂರು: ಭಾರತ ಅಂಧರ ಕ್ರಿಕೆಟ್ ಮಂಡಳಿ (ಸಿಎಬಿಐ) ಅಧ್ಯಕ್ಷ ಜಿ.ಕೆ.ಮಹಾಂತೇಶ್ ಡಬ್ಲೂéಬಿಸಿಸಿ(ವಿಶ್ವ ಅಂಧರ ಕ್ರಿಕೆಟ್ ಕೌನ್ಸಿಲ್)ಗೆ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
Advertisement
ಜ.29ರಂದು ನಡೆದ ಅಂಧರ ಕ್ರಿಕೆಟ್ ವಾರ್ಷಿಕ ಸಭೆಯಲ್ಲಿ ವಿಶ್ವ ಅಂಧರ ಕ್ರಿಕೆಟ್ನ ಪದಾಧಿಕಾರಿಗಳು ಸರ್ವಾನುಮತದಿಂದ ಇವರನ್ನು ಆಯ್ಕೆ ಮಾಡಿದರು. ಮಹಾಂತೇಶ್ ಹಲವಾರು ವರ್ಷಗಳಿಂದ ಸಮರ್ಥನಂ ಟ್ರಸ್ಟ್ ಜತೆಗೆ ಅಂಧರ ಕ್ರಿಕೆಟ್ಗೆ ಪ್ರೋತ್ಸಾಹ ನೀಡಿಕೊಂಡು ಬಂದಿದ್ದಾರೆ. ಸಿಎಬಿಐ ಅನ್ನು ದೊಡ್ಡ ಮಟ್ಟದಲ್ಲಿ ಕಟ್ಟಿ ಬೆಳೆಸಿದ ಕೀರ್ತಿ ಮಹಾಂತೇಶ್ಗೆ ಸಲ್ಲುತ್ತದೆ.