Advertisement

Blind ಸ್ನೇಹ ಸರಣಿ: ಪಾಕ್‌ ವಿರುದ್ಧ ಭಾರತಕ್ಕೆ ಗೆಲುವು

11:30 PM Feb 23, 2024 | Team Udayavani |

ದುಬಾೖ: ಸುನೀಲ್‌ ರಮೇಶ್‌ ಮತ್ತು ಡಿ. ವೆಂಕಟೇಶ್ವರ ರಾವ್‌ ಅವರ ಅರ್ಧಶತಕದ ನೆರವಿನಿಂದ ಭಾರತ ತಂಡವು ಅಂಧರ ಸ್ನೇಹ ಸರಣಿಯ ಎರಡನೇ ಟಿ20 ಪಂದ್ಯದಲ್ಲಿ ಪಾಕಿಸ್ಥಾನವನ್ನು 46 ರನ್ನುಗಳಿಂದ ಸೋಲಿಸಿದೆ.

Advertisement

ರಮೇಶ್‌ ಅವರ 87 ಮತ್ತು ರಾವ್‌ ಅವರ 56 ರನ್‌ ನೆರವಿನಿಂದ ಭಾರತ ತಂಡವು ಮೂರು ವಿಕೆಟಿಗೆ 224 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಅವರಿಬ್ಬರು ಮೊದಲ ವಿಕೆಟಿಗೆ 121 ರನ್ನುಗಳ ಜತೆಯಾಟ ನಡೆಸಿದ್ದರು. ಈ ನಡುವೆ ಅಜಯ್‌ ಕುಮಾರ್‌ ರೆಡ್ಡಿ 42 ರನ್‌ ಹೊಡೆದಿದ್ದರು. ಇದಕ್ಕುತ್ತರವಾಗಿ ಪಾಕಿಸ್ಥಾನ ತಂಡವು ಆರು ವಿಕೆಟಿಗೆ 178 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು. ಈ ಗೆಲುವಿನಿಂದಾಗಿ ಈ ಸರಣಿ 1-1 ಅಂತರದಿಂದ ಸಮಬಲಗೊಂಡಿದೆ. ಸರಣಿಯ ಅಂತಿಮ ಪಂದ್ಯ ರವಿವಾರ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next