Advertisement

ಪ್ರಧಾನಿಯನ್ನು ಭೇಟಿ ಮಾಡಿದ ವಿಶ್ವಕಪ್‌ ವಿಜೇತ ಅಂಧರ ತಂಡ

11:25 AM Mar 01, 2017 | Harsha Rao |

ಹೊಸದಿಲ್ಲಿ: ಸತತ 2ನೇ ಸಲ ಅಂಧರ ವಿಶ್ವಕಪ್‌ ಕ್ರಿಕೆಟ್‌ ಪ್ರಶಸ್ತಿ ಗೆದ್ದ ಭಾರತ ತಂಡದ ಸದಸ್ಯರು ಮಂಗಳವಾರ ಹೊಸದಿಲ್ಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು. 

Advertisement

ಈ ಸಂದರ್ಭದಲ್ಲಿ ತಂಡದ ಸಾಧನೆಯನ್ನು ಕೊಂಡಾಡಿದ ಪ್ರಧಾನಿಯವರು ವಿಶ್ವ ವಿಜೇತರಿಗೆ ಅಭಿನಂದನೆ ಸಲ್ಲಿಸಿದರು. ಭವಿಷ್ಯದಲ್ಲಿ ಇನ್ನೂ ಉತ್ತಮ ಮಟ್ಟದ ಸಾಧನೆ ಹೊರಹೊಮ್ಮಲಿ ಎಂದು ಹಾರೈಸಿದರು.

ಭೇಟಿಯ ಸವಿನೆನಪಿಗಾಗಿ ತಂಡದ ಸದಸ್ಯರು ತಮ್ಮ ಹಸ್ತಾಕ್ಷರವುಳ್ಳ ಬ್ಯಾಟ್‌, ಬಾಲ್‌ ಮತ್ತು ಮೋದಿ ಅವರ ಹೆಸರುಳ್ಳ ಟೀಮ್‌ ಜೆರ್ಸಿಯೊಂದನ್ನು ಪ್ರಧಾನಿಯವರಿಗೆ ಉಡುಗೊರೆಯಾಗಿ ನೀಡಿದರು. ಪ್ರತಿಯಾಗಿ ಮೋದಿ ಅವರು ತಮ್ಮ ಹಸ್ತಾಕ್ಷರವಿರುವ ಬ್ಯಾಟ್‌ ಹಾಗೂ ಚೆಂಡೊಂದನ್ನು ತಂಡಕ್ಕೆ ಸ್ಮರಣಿಕೆಯಾಗಿ ನೀಡಿದರು.

ಬೆಂಗಳೂರಿನಲ್ಲಿ ನಡೆದ ಅಂಧರ ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯ ಫೈನಲ್‌ನಲ್ಲಿ ಪಾಕಿಸ್ಥಾನವನ್ನು ಮಣಿಸಿದ ಭಾರತ
ಕಪ್‌ ಎತ್ತಿಹಿಡಿದು ಮೆರೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next