Advertisement

ಸೇತು ಸಮುದ್ರಂ ಯೋಜನೆ: ಬಿಜೆಪಿಯ ಯು ಟರ್ನ್; ಷರತ್ತುಗಳೊಂದಿಗೆ ಸ್ಟಾಲಿನ್ ಗೆ ಬೆಂಬಲ

06:58 PM Jan 12, 2023 | Team Udayavani |

ಚೆನ್ನೈ : ಸೇತುಸಮುದ್ರಂ ಯೋಜನೆಯನ್ನು ವಿಳಂಬ ಮಾಡದೆ ಜಾರಿಗೊಳಿಸುವಂತೆ ಕೇಂದ್ರವನ್ನು ಒತ್ತಾಯಿಸುವ ನಿರ್ಣಯವನ್ನು ತಮಿಳುನಾಡು ವಿಧಾನಸಭೆ ಗುರುವಾರ ಅಂಗೀಕರಿಸಿದೆ. ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಮಂಡಿಸಿದ ನಿರ್ಣಯದಲ್ಲಿ, ತಮಿಳುನಾಡು ಮತ್ತು ದೇಶದ ಆರ್ಥಿಕ ಬೆಳವಣಿಗೆಗೆ ಯೋಜನೆಯು ಮಹತ್ವದ್ದಾಗಿರುವುದರಿಂದ ಯೋಜನೆಯನ್ನು ವಿಳಂಬ ಮಾಡದಂತೆ ಕೇಂದ್ರ ಸರ್ಕಾರವನ್ನು ವಿನಂತಿಸಿದ್ದಾರೆ.

Advertisement

ರಾಜಕೀಯ ಕಾರಣಗಳಿಂದ ಬಿಜೆಪಿ ಸೇತುಸಮುದ್ರ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಈ ಯೋಜನೆಯ ಪರವಾಗಿದ್ದರು ಆದರೆ ಇದ್ದಕ್ಕಿದ್ದಂತೆ ತಮ್ಮ ನಿಲುವನ್ನು ಬದಲಾಯಿಸಿದ್ದರು, ಅದರ ವಿರುದ್ಧ ಪ್ರಕರಣ ದಾಖಲಿಸಿದ್ದರು ಎಂದು ಸ್ಟಾಲಿನ್ ಹೇಳಿದ್ದಾರೆ.

“ಸೇತುಸಮುದ್ರಂ ಯೋಜನೆಯು ತಮಿಳುನಾಡು ಮತ್ತು ಭಾರತದ ಆರ್ಥಿಕ ಅಭಿವೃದ್ಧಿಯನ್ನು ಬಲಪಡಿಸಲು ಅವಶ್ಯಕವಾಗಿದೆ. ಈ ಮಹತ್ತರ ಯೋಜನೆಯನ್ನು ಮೂಲತಃ 1860 ರಲ್ಲಿ ಕಮಾಂಡರ್ ಟೇಲರ್ ಅವರು 50 ಲಕ್ಷ ರೂ. ವೆಚ್ಚದಲ್ಲಿ ರೂಪಿಸಿದ್ದರು”ಎಂದು ಸಿಎಂ ಸ್ಟಾಲಿನ್ ನಿರ್ಣಯವನ್ನು ಮಂಡಿಸಿದರು.

2,400ಕೋಟಿ ರೂ. ಉಪಕ್ರಮವನ್ನು ಅಂತಿಮವಾಗಿ ಕಾಂಗ್ರೆಸ್ ನೇತೃತ್ವದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಆಡಳಿತವು ಪ್ರಾರಂಭಿಸಿತ್ತು, ಆದರೆ 2007 ರಲ್ಲಿ ಹಿಂದೂ ಗುಂಪುಗಳು ಧಾರ್ಮಿಕ ಆಧಾರದ ಮೇಲೆ ಮತ್ತು ಕೆಲವು ಪರಿಸರವಾದಿಗಳಿಂದ ಪ್ರತಿಭಟನೆಯ ನಂತರ ಸುಪ್ರೀಂ ಕೋರ್ಟ್ ತಡೆ ನೀಡಿತ್ತು.

ಸಂಸತ್ತಿನಲ್ಲಿ ಕೇಂದ್ರ ವಿಜ್ಞಾನ ಸಚಿವರ ಇತ್ತೀಚಿನ ಹೇಳಿಕೆಯು ಸರ್ಕಾರವು ತನ್ನ ಸಂಶೋಧನೆಗಳನ್ನು ಸುಪ್ರೀಂ ಕೋರ್ಟ್‌ಗೆ ತಿಳಿಸಿದ ನಂತರ ಯೋಜನೆಯನ್ನು ಮತ್ತೆ ಪ್ರಾರಂಭಿಸುವ ಭರವಸೆಯನ್ನು ಪುನರುಜ್ಜೀವನಗೊಳಿಸಿದೆ. ಈ ಹಿಂದೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಬಿಜೆಪಿ ಗುರುವಾರ ನಿರ್ಣಯವನ್ನು ಬೆಂಬಲಿಸಿದೆ.

Advertisement

ಸದನದಲ್ಲಿ ಬಿಜೆಪಿ ಮುಖಂಡ ನೈನಾರ್ ನಾಗೇಂದ್ರನ್, “ರಾಮಸೇತುವಿನ ಮೇಲೆ ಪರಿಣಾಮ ಬೀರದಿದ್ದಲ್ಲಿ ನಾವು ಯೋಜನೆಯನ್ನು ಸ್ವಾಗತಿಸುತ್ತೇವೆ.ನಾವು ಈ ನಿರ್ಣಯವನ್ನು ಬೆಂಬಲಿಸುತ್ತೇವೆ, ಯೋಜನೆಯು ಜಾರಿಗೆ ಬಂದರೆ ವಾಸ್ತವವಾಗಿ ದಕ್ಷಿಣ ತಮಿಳುನಾಡಿನಲ್ಲಿ ನಮಗಿಂತ ಹೆಚ್ಚು ಸಂತೋಷವಾಗಿರುವವರು ಬೇರೊಬ್ಬರಿಲ್ಲ” ಎಂದಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next