Advertisement

ಶುಕ್ರವಾರ ಬಿಜಿಪಿಯ ರಾಜ್ಯ ಕಾರ್ಯಕಾರಿಣಿ: ಮುಂದಿನ ಚುನಾವಣೆಯೇ ಪ್ರಮುಖ ಅಜೆಂಡಾ

12:39 PM Oct 06, 2022 | Team Udayavani |

ಬೆಂಗಳೂರು: ಬಿಜಿಪಿಯ ರಾಜ್ಯ ಕಾರ್ಯಕಾರಿಣಿ ಶುಕ್ರವಾರ ಅರಮನೆ ಮೈದಾನದ ತ್ರಿಪುರ ನಿವಾಸಿಯಲ್ಲಿ ನಡೆಯಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ‌.ಟಿ.ರವಿ ಹೇಳಿದರು.

Advertisement

ಗುರುವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಸುಮಾರು 592 ಮಂದಿ ಭಾಗವಹಿಸಲಿದ್ದಾರೆ ಎಂದರು.

ಇದನ್ನೂ ಓದಿ:ಪಾರ್ಕಿಂಗ್ ಮಾಡಿದ ಹಳೆಯ ಕಾರುಗಳಿಂದ ನಿವಾಸಿಗಳಿಗೆ ತೊಂದರೆ! 2 ದಿನಗಳಲ್ಲಿ 2,000 ದೂರುಗಳು

ರಾಜ್ಯದ ಮುಂದಿನ ಚುನಾವಣೆ, ಮುಂದಿನ 25 ವರ್ಷಕ್ಕೆ ಭಾರತದ ಅಭಿವೃದ್ದಿಗೆ ಕರ್ನಾಟಕದ ರೋಡ್ ಮ್ಯಾಪ್ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಯಲಿವೆ ಎಂದು ಹೇಳಿದರು. ಅಪೇಕ್ಷಿತರು ಕಾರ್ಯಕಾರಿಣಿಯಲ್ಲಿ ಭಾಗವಹಿಸಲು ಸಲುವಾಗಿ, ಬಸ್ ಮತ್ತು ಟ್ರೈನ್ ಟಿಕೆಟ್ ಮತ್ತು ಅತಿಥಿ ಗೃಹಗಳನ್ನು ಬುಕ್ ಮಾಡಲಾಗಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next