Advertisement

ಬಿಜೆಪಿಯವರು ಇಸ್ಪೀಟ್ ಜೂಜಾಟ ಆಡುತ್ತಾರೆ: ಸಚಿವ ಇಕ್ಬಾಲ್ ಅನ್ಸಾರಿ

10:02 AM Nov 15, 2021 | Team Udayavani |

ಗಂಗಾವತಿ: ತಾವು ಶಾಸಕರಾಗಿ, ಸಚಿವರಾಗಿ ಗಂಗಾವತಿ ಹಾಗೂ ಕೊಪ್ಪಳ ಜಿಲ್ಲೆಯಲ್ಲಿ ಮಾಡಿದ ಅಭಿವದ್ಧಿ ಕಾರ್ಯವನ್ನು ಮೆಚ್ಚಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ರಾಯಚೂರು ಬಳ್ಳಾರಿ ಕೊಪ್ಪಳ ಲೋಕಸಭಾ ಕ್ಷೇತ್ರಗಳ ಪ್ರಚಾರ ಸಭೆಯನ್ನು ಗಂಗಾವತಿಯಲ್ಲಿ ಮಾಡಿದ್ದರು ಎಂದು ಮಾಜಿ ಸಚಿವ ಕಾಂಗ್ರೆಸ್ ಹಿರಿಯ ಮುಖಂಡ ಇಕ್ಬಾಲ್ ಅನ್ಸಾರಿ ಹೇಳಿದರು.

Advertisement

ಅವರು ತಾಲೂಕಿನ ವಡ್ಡರಹಟ್ಟಿಯಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸೂಚನೆ ಮೇರೆಗೆ ಜನಜಾಗೃತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ತಮ್ಮ ಅವಧಿಯಲ್ಲಿ ನಗರದ ರಸ್ತೆಗಳು ಬಸ್ ನಿಲ್ದಾಣ ಸರ್ಕ್ಯೂಟ್ ಮಿನಿ ವಿಧಾನಸೌಧ ಐಟಿಐ ಕಾಲೇಜ್ ಸೇರಿದಂತೆ ಮೂಲಸೌಕರ್ಯಗಳನ್ನು ಗಂಗಾವತಿಗೆ ಕೋಟ್ಯಾಂತರ ರೂಪಾಯಿಗಳನ್ನು ಅನುದಾನ ತಂದು ಅಭಿವೃದ್ಧಿ ಪಡಿಸಲಾಗಿದೆ. ಈ ಹಿಂದೆ ಮತ್ತು ಪ್ರಸ್ತುತ ಬಿಜೆಪಿ ಶಾಸಕರು ಯಾವುದೇ ಅಭಿವೃದ್ಧಿ ಕಾರ್ಯ ಮಾಡದೆ ಕಮಿಷನ್ ಆಸೆಯಲ್ಲಿ ತೊಡಗಿದ್ದಾರೆ. ಮಕ್ಕಳಿಗೆ ವಿತರಿಸುವ ಮೊಟ್ಟೆ ಸೈಕಲ್ ಬಟ್ಟೆ ಹಾಗೂ ಬಡವರಿಗೆ ವಿತರಿಸುವ ಪಡಿತರ ಅಕ್ಕಿ ದವಸ ಧಾನ್ಯಗಳಲ್ಲಿ ಶಾಸಕರು ಕಮಿಷನ್ ಪಡೆಯುತ್ತಿದ್ದಾರೆ. ತಾವು ನಿರ್ಮಿಸಿದ ಸರ್ಕ್ಯೂಟ್ ಹೌಸ್ ಪ್ರವಾಸಿ ಮಂದಿರಗಳಲ್ಲಿ ಬಿಜೆಪಿ ಕಾರ್ಯಕರ್ತರು ಮದ್ಯಸೇವನೆ ಇಸ್ಪೀಟ್ ಜೂಜಾಟ ಆಡುತ್ತಾ ಜನರ ತೆರಿಗೆ ಹಣದಲ್ಲಿ ಮಜಾ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ:ಭಜರಂಗಿಗೆ ಬಲ ತುಂಬಿದ ಶಿವಣ್ಣ

ಗಂಗಾವತಿಯಲ್ಲಿ ಕಳೆದ 20 ವರ್ಷಗಳಲ್ಲಿ 1 ಫ್ಲಾಟನ್ನು ಬಡಜನರಿಗೆ ನೀಡಿಲ್ಲ ಕಳೆದ ಹತ್ತು ವರ್ಷಗಳಲ್ಲಿ 1 ಮನೆಯನ್ನು ಸಹ ಬಡವರಿಗೆ ನೀಡಿಲ್ಲ. ಬಡವರು ತಮ್ಮ ಕೆಲಸ ಕಾರ್ಯಗಳಿಗೆ ನಗರಸಭೆ ಸೇರಿದಂತೆ ಸರ್ಕಾರಿ ಕಚೇರಿಗಳಿಗೆ ಹೋದರೆ ಅಲ್ಲಿ ವ್ಯಾಪಕವಾದ ಭ್ರಷ್ಟಾಚಾರ ತಾಂಡವವಾಡುತ್ತಿದೆ ಇದಕ್ಕೆ ಕಾರಣ ಬಿಜೆಪಿ ಶಾಸಕರು ಮತ್ತು ಸರಕಾರ ಮುಂಬರುವ ದಿನಗಳಲ್ಲಿ ಜಾತಿ ರಹಿತ ಭ್ರಷ್ಟಾಚಾರ ರಹಿತ ಸರ್ಕಾರ ನೀಡಲು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ವ್ಯಾಪಕ ಸಂಘಟನೆ ಮಾಡಿ ಪ್ರಚಾರ ನಡೆಸಲಿದೆ. ಖಚಿತವಾಗಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅತ್ಯಧಿಕ ಬಹುಮತ ಪಡೆದು ಸರ್ಕಾರ ರಚನೆ ಮಾಡಲಿದೆ. ಚುನಾವಣೆ ಇನ್ನೂ ಒಂದೂವರೆ ವರ್ಷ ಇದ್ದು ತಾವು ಇಡೀ ಕ್ಷೇತ್ರದಲ್ಲಿ ಸಂಚಾರ ಮಾಡಿ ಪಕ್ಷ ಸಂಘಟನೆಯನ್ನು ಮಾಡಲಾಗುತ್ತದೆ ಜೊತೆಗೆ ಬಡವರ ಮತ್ತು ದುರ್ಬಲರಿಗೆ ನಿರಂತರ ನೆರವು ನೆರವು ನೀಡುವುದಾಗಿ ಹೇಳಿದರು.

Advertisement

ಕಾಂಗ್ರೆಸ್ ಹಿರಿಯ ಮುಖಂಡ ನೆಕ್ಕಂಟಿ ಸೂರಿಬಾಬು ಪ್ರಾಸ್ತಾವಿಕ ಮಾತನಾಡಿ ಬಿಜೆಪಿ ಸರಕಾರ ಬಂದ ನಂತರ ಬಡವರು ಮತ್ತು ಮಧ್ಯಮವರ್ಗದವರು ಸಂಕಷ್ಟಗಳನ್ನು ಅನುಭವಿಸುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ ಅಗತ್ಯ ವಸ್ತುಗಳ ದರವನ್ನು ಹೆಚ್ಚಳ ಮಾಡಿ ಕಳೆದ 70 ವರ್ಷಗಳಿಂದ ಕಾಂಗ್ರೆಸ್ ಸರ್ಕಾರ ದೇಶಕ್ಕೆ ಮಾಡಿದ್ದ ಬೃಹತ್  ಸಂಸ್ಥೆಗಳನ್ನು ಬಿಜೆಪಿ ಸರಕಾರ ಅದಾನಿ ಅಂಬಾನಿ ಸೇರಿದಂತೆ ಪ್ರಮುಖ ಕಾರ್ಪೊರೇಟ್ ಕಂಪೆನಿಗಳಿಗೆ ಮಾರಾಟ ಮಾಡಿ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ. ಬಡ ಜನರು ಜೀವನ ಮಾಡುವುದು ಕಷ್ಟವಾಗಿದೆ. ಆದ್ದರಿಂದ ಜನರು ಎಚ್ಚರಗೊಂಡು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು. ಮುಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರನ್ನು ಮಾಡಲು ಇಡೀ ರಾಜ್ಯದ ಜನರು ಅಧಿಕ ಕಾಂಗ್ರೆಸ್ ಶಾಸಕರನ್ನು ಗಂಗಾವತಿಯಲ್ಲಿ ಇಕ್ಬಾಲ್ ಅನ್ಸಾರಿ ಅಭಿವೃದ್ಧಿಯ ಹರಿಕಾರ ಅವರನ್ನು ಪುನಃ ಗೆಲ್ಲಿಸಿ ಗಂಗಾವತಿಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸಲು ಕೈಜೋಡಿಸುವಂತೆ ಮನವಿ ಮಾಡಿದರು.

ನಗರಸಭೆಯ ಮಾಜಿ ಅಧ್ಯಕ್ಷ ಶಾಮೀದ್ ಮನಿಯಾರ್, ನ್ಯಾಯವಾದಿ ಶರಣೇಗೌಡ ಆರಾಳ, ವಡ್ಡರಹಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷ ಭರತ್, ಉಪಾಧ್ಯಕ್ಷೆ ಹುಲಿಗೆಮ್ಮ,ಮುಖಂಡರಾದ ರಮೇಶ್ ಕಾಳೆ ಸೇರಿ ಅನೇಕರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next