Advertisement

ಜಿಲ್ಲಾಡಳಿತದ ನಿಯಮ ಬಾಹಿರ ವರ್ತನೆ: ಬಿಜೆಪಿ ಯುವಮೋರ್ಚಾ

05:45 PM Apr 04, 2019 | Team Udayavani |

ಕುಂದಾಪುರ: ನೆಹರೂ ಮೈದಾನದಲ್ಲಿ ಯಕ್ಷಗಾನ ಸೇರಿದಂತೆ ಯಾವುದೇ ಸಭೆ ಸಮಾರಂಭ ನಡೆಸಲು ಅನುಮತಿ ನೀಡತಕ್ಕದಲ್ಲ ಎಂದು ಉಡುಪಿ ಜಿಲ್ಲಾಧಿಕಾರಿ ಈ ಹಿಂದೆ ಆದೇಶ ಮಾಡಿದ್ದು, ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪ್ರಚಾರ ಸಭೆಗೆ ಅನುಮತಿ ನೀಡುವ ಮೂಲಕ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಬಿಜೆಪಿ ಆಕ್ಷೇಪಿಸಿದೆ.

Advertisement

ಈ ಹಿಂದೆ ಇದೇ ಸ್ಥಳದಲ್ಲಿ ಭಾರತೀಯ ಜನತಾ ಪಾರ್ಟಿಯ ಪ್ರಚಾರ ರ್ಯಾಲಿಗಾಗಿ ನಾವು ಅನುಮತಿ ಕೇಳಿದಾಗ ಎಪ್ರಿಲ್‌ ಅಂತ್ಯದವರೆಗೆ ಯಾವುದೇ ಸಭೆ ಸಮಾರಂಭ ಮತ್ತು ರಾಜಕೀಯ ಪಕ್ಷಗಳ ಪ್ರಚಾರಕ್ಕೆ ಅನುಮತಿ ಕೊಡುವುದಿಲ್ಲವೆಂದು ಜಿಲ್ಲಾಡಳಿತದ ಆದೇಶ ಪ್ರತಿ ತೋರಿಸಿ ಎಸಿ ಮತ್ತು ತಹಶಿಲ್ದಾರ್‌ ಅನುಮತಿ ಕೊಟ್ಟಿಲ್ಲ.

ಆದರೆ ಇದೀಗ ಚುನಾವಣಾ ನೀತಿ ಸಂಹಿತೆ ಇರುವಾಗಲೇ ನಿಯಮ ಮತ್ತು ಆದೇಶವನ್ನು ಮುಚ್ಚಿಟ್ಟು ಮುಖ್ಯಮಂತ್ರಿಗಳ ಪ್ರಭಾವಕ್ಕೆ ಒಳಗಾಗಿ ಕಾನೂನು ಬಾಹಿರವಾಗಿ ಆಡಳಿತ ಯಂತ್ರವನ್ನು ದುರುಪಯೋಗ ಪಡಿಸಿಕೊಂಡು ಅನುಮತಿ ಕೊಟ್ಟಿರುವುದನ್ನು ಬಿಜೆಪಿ ಖಂಡಿಸುತ್ತದೆ ಮತ್ತು ಅಧಿಕಾರಿಗಳ ಪಕ್ಷಪಾತ ನಿರ್ಧಾರದ ವಿರುದ್ಧ ರಾಜ್ಯ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ದೂರು ನೀಡಲಾಗುವುದು ಎಂದು ಕುಂದಾಪುರ ಯುವಮೋರ್ಚಾ ಅಧ್ಯಕ್ಷ ಸತೀಶ ಪೂಜಾರಿ ವಕ್ವಾಡಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next