Advertisement

PM Modi ಪ್ರಚಾರ ಮಾಡದಿದ್ದರೆ ಬಿಜೆಪಿ ಹೀನಾಯವಾಗಿ ಸೋಲುತ್ತಿತ್ತು: ಯತ್ನಾಳ್

03:50 PM Aug 14, 2023 | Team Udayavani |

ವಿಜಯಪುರ: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಲು ಮೀಸಲಾತಿ ವಿಷಯದ ಕುರಿತು ಸೂಕ್ತ ಮನವರಿಕೆ ಮಾಡಿಕೊಡದಿರುವುದು ಸೇರಿದಂತೆ ಹಲವು ಕಾರಣಗಳಿವೆ. ಹಿಂದೆ ಈ ಪುಣ್ಯಾತ್ಮನೇ ಮುಖ್ಯಮಂತ್ರಿ ಎಂದು ಘೋಷಿಸಿದಾಗ 40 ಸ್ಥಾನ ಕೂಡ ಗೆಲ್ಲಲಾಗಲಿಲ್ಲ ಎಂದು ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಜಗದೀಶ ಶಟ್ಟರ್ ವಿರುದ್ಧ ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ವಾಗ್ದಾಳಿ ನಡೆಸಿದರು.

Advertisement

ಸೋಮವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಜಗದೀಶ ಶಟ್ಟರ, ಲಕ್ಷ್ಮಣ ಸವದಿ ಹೆಸರು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ ಯತ್ನಾಳ್, ತಮಗೆ ಎಲ್ಲವನ್ನೂ ನೀಡಿದ ಬಿಜೆಪಿ ಪಕ್ಷಕ್ಕೆ ಜೀವಿತಾವಧಿವರೆಗೂ ಪಕ್ಷದ ಕಛೇರಿ ಕಸಗೂಡಿಸಿ ಕೃತಜ್ಞರಾಗಿರಬೇಕಿದ್ದ ಮೊನ್ನೆ ಕಾಂಗ್ರೆಸ್ ಸೇರಿದ ಇಬ್ಬರು ಉತ್ತರ ಕರ್ನಾಟಕದ ಆ ಇಬ್ಬರು ನಾಯಕರು, ತಾವು ಬಿಜೆಪಿ ತೊರೆದ ಕಾರಣವೇ ಬಿಜೆಪಿ ಸೋತಿದೆ ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಈ ಪುಣ್ಯಾತ್ಮನೇ ಸಿಎಂ ಎಂದು ಘೋಷಸಿಯೇ ಹಿಂದೆ ರಾಜ್ಯದಲ್ಲಿ ಬಿಜೆಪಿ 40 ಸ್ಥಾನ ಗೆಲ್ಲಲು ಆಗಲಿಲ್ಲ ಎಂದು ಶಟ್ಟರ್ ವಿರುದ್ಧ ಕುಟುಕಿದರು.

ಕಳೆದ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ನಮ್ಮ ಅನೇಕ ತಪ್ಪುಗಳು ಕಾರಣವಾಗಿವೆ. ಬಿಜೆಪಿ ವಿರೋಧಿ ಅಲೆಯ ಮಧ್ಯೆಯೂ 66 ಸ್ಥಾನ ಗೆದ್ದಿರುವುದು ಸಣ್ಣ ಸಾಧನೆ ಏನಲ್ಲ. ನಮ್ಮ ಸರ್ಕಾರ ಜಾರಿಗೆ ತಂದಿದ್ದ ಒಳ ಮೀಸಲಾತಿ ಬಗ್ಗೆ ಜನರಿಗೆ ತಿಳುವಳಿಕೆ ನೀಡುವಲ್ಲಿ ನಾವು ಸೋತೆವು. ಕಾಂಗ್ರೆಸ್ ಪಂಚ ಗ್ಯಾರಂಟಿ ನಮ್ಮ ಸೋಲಿಗೆ ಕಾರಣವಾದವು. ರಾಜ್ಯದ ಮತದಾರರು ನೀಡಿರುವ ಶಿಕ್ಷೆಯನ್ನು ನಾವು ಒಪ್ಪಿಕೊಂಡಿದ್ದೇವೆ  ಎಂದರು.

ಇದನ್ನೂ ಓದಿ:Adani Group: ಆಡಿಟರ್‌ ಸಂಸ್ಥೆ ಡೆಲಾಯ್ಟ್‌ ರಾಜೀನಾಮೆ ಬೆನ್ನಲ್ಲೇ ಅದಾನಿ ಷೇರು ಮೌಲ್ಯ ಕುಸಿತ

ಒಂದೊಮ್ಮೆ ಪ್ರಧಾನಿ ಮೋದಿ ಅವರು ಪ್ರಚಾರ ಮಾಡದಿದ್ದರೆ ಬಿಜೆಪಿ ಸ್ಥಿತಿ ಇನ್ನೂ ಚಿಂತಾಜನಕ ಆಗಿರುತ್ತಿತ್ತು. ನಮ್ಮ ಸೋಲು ಹೀನಾಯ ಆಗಿರುತ್ತಿತ್ತು ಎಂದು ವಿಧಾನಸಭೆ ಚುನಾವಣೆ ಸೋಲನ್ನು ವಿಶ್ಲೇಷಿಸಿದರು.

Advertisement

ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳಲ್ಲಿ ಬಿಜೆಪಿ ಮತ್ತೆ 25 ಸ್ಥಾನ ಗೆಲ್ಲಲಿದೆ. ಮುಂದಿನ ಆರು ತಿಂಗಳಲ್ಲಿ ಕಾಂಗ್ರೆಸ್ ಪಕ್ಷದ ಹಣೆ ಬರಹ ಏನಾಗುತ್ತದೆ ಎಂದು ದೇಶದ‌ ಜನ ನೋಡಲಿದ್ದಾರೆ ಎಂದರು.

ಮೂರು ತಿಂಗಳ ಹಿಂದಿದ್ದ ಕಾಂಗ್ರೆಸ್ ಈಗ ಇಲ್ಲ. ಮೂರೇ ತಿಂಗಳಲ್ಲಿ ಕಾಂಗ್ರೆಸ್ ಆಡಳಿತದ ವಿರುದ್ಧ ಜನಾಕ್ರೋಶ ಜೋರಾಗಿದೆ. ಕೆಲವೇ ತಿಂಗಳಲ್ಲಿ ಗ್ಯಾರಂಟಿನೂ ಇಲ್ಲ ವಾರೆಂಟಿನೂ ಇಲ್ಲ. ಕಾಂಗ್ರೆಸ್ಸಿನ ವಾರಂಟಿನೇ ಮುಗಿಯಲಿದೆ ಎಂದು ಯತ್ನಾಳ ಟೀಕಿಸಿದರು.

ಮಾಜಿ ಶಾಸಕ ಕುಮಾರ ಬಂಗಾರಪ್ಪ ಕಾಂಗ್ರೆಸ್ ಪಕ್ಷದ ಯಾವುದೇ ನಾಯಕರನ್ನು ಭೇಟಿ ಮಾಡಿರಲಿ, ಕಾಂಗ್ರೆಸ್ ಪಕ್ಷಕ್ಕೆ ಸೇರುವುದಿಲ್ಲ ಎಂಬ ವಿಶ್ವಾಸವಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next