Advertisement

ಇನ್ನು ಆರು ತಿಂಗಳಲ್ಲಿ ಟಿಎಂಸಿ ಇರಲ್ಲ; ಪ.ಬಂ.ದಲ್ಲಿ ಬಿಜೆಪಿ ಸರಕಾರ: ಸಂಸದೆ ದೇಬಶ್ರೀ

11:05 AM Jun 01, 2019 | Team Udayavani |

ಕೋಲ್ಕತ : ಪಶ್ಚಿಮ ಬಂಗಾಲದಲ್ಲಿ ಮುಂದಿನ ಸರಕಾರವನ್ನು ಭಾರತೀಯ ಜನತಾ ಪಕ್ಷ ರಚಿಸಲಿದೆ ಎಂಬ ವಿಶ್ವಾಸವನ್ನು ರಾಜ್ಯದ ರಾಯಗಂಜ್‌ನ ಬಿಜೆಪಿ ಸಂಸದೆ ದೇಬಶ್ರೀ ಚೌಧರಿ ವ್ಯಕ್ತಪಡಿಸಿದ್ದಾರೆ.

Advertisement

ಪ್ರಧಾನಿ ಮೋದಿ ಅವರ ನೂತನ ಸಚಿವ ಸಂಪುಟಕ್ಕೆ ಸೇರುವ ಕರೆ ತನಗೆ ಬರಬಹುದೆಂಬ ವಿಶ್ವಾಸದಲ್ಲಿರುವ ದೇಬಶ್ರೀ ಅವರು ಎಎನ್‌ಐ ಜತೆ ಮಾತನಾಡುತ್ತಾ, ಪಶ್ಚಿಮ ಬಂಗಾಲದಲ್ಲಿ ಮುಂಬರುವ ವಿಧಾನ ಸಭಾ ಚುನಾವಣೆಯು ಏಕಪಕ್ಷೀಯವಾಗಲಿದೆ ಎಂದು ಹೇಳಿದರು.

ಇನ್ನು ಐದು-ಆರು ತಿಂಗಳಲ್ಲಿ ಪಶ್ಚಿಮ ಬಂಗಾಲದಲ್ಲಿ ತೃಣಮೂಲ ಕಾಂಗ್ರೆಸ್‌ ಪಕ್ಷವೇ ಇರುವುದಿಲ್ಲ; ಅದು ಸಂಪೂರ್ಣವಾಗಿ ನಶಿಸಿ ಹೋಗಿರುತ್ತದೆ; ಏಕೆಂದರೆ ಟಿಎಂಸಿಯ ಹೆಚ್ಚಿನೆಲ್ಲ ಶಾಸಕರು, ಕೌನ್ಸಿಲರ್‌ಗಳು ಬಿಜೆಪಿಗೆ ಸೇರುತ್ತಿದ್ದಾರೆ ಎಂದು ದೇಬಶ್ರೀ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next