Advertisement

FIR ದಾಖಲಾದ ಬಿಜೆಪಿಯವರು ರಾಜೀನಾಮೆ ನೀಡಲಿ: ಕೃಷ್ಣ ಭೈರೇಗೌಡ

01:07 AM Oct 05, 2024 | Team Udayavani |

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿಯವರು, ಅದನ್ನು ಬಿಟ್ಟು ಯಾರ್ಯಾರ ಮೇಲೆ ಎಫ್ಐಆರ್‌ ಆಗಿದೆಯೋ ಅವರೆಲ್ಲ ರಾಜೀನಾಮೆ ನೀಡಲಿ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಆಗ್ರಹಿಸಿದರು.

Advertisement

ನಗರದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡಿ, ಬಿಜೆಪಿಯ ಹಲವು ನಾಯಕರ ಮೇಲೆ ಎಫ್ಐಆರ್‌ ದಾಖಲಾಗಿದೆ, ಚಾರ್ಜ್‌ಶೀಟ್‌ ಆಗಿದೆ. ಕೆಲವರು ಜಾಮೀನು ಮೇಲೆ ಇ¨ªಾರೆ. ಅವರೆಲ್ಲ ತಮ್ಮ ಸ್ಥಾನಗಳಿಗೆ ರಾಜೀನಾಮೆ ಕೊಡಲಿ ಎಂದು ಒತ್ತಾಯಿಸಿದರು.

ಮುಡಾ ನಿವೇಶನಗಳನ್ನು ಸಿಎಂ ಕುಟುಂಬದವರು ವಾಪಸ್‌ ಕೊಟ್ಟಿರುವುದು ಅವರ ವೈಯಕ್ತಿಕ ತೀರ್ಮಾನ. ಸಿಎಂ ಪತ್ನಿ ಅವರ ಜಮೀನನ್ನು ಮುಡಾದವರು ಒತ್ತುವರಿ ಮಾಡಿದ್ದರು. ಅದಕ್ಕೆ ಬದಲಾಗಿ 14 ನಿವೇಶನ ನೀಡಿದ್ದರು. ಇದು ಡಿನೋಟಿಫಿಕೇಶನ್‌ ಭೂಮಿ ಅಲ್ಲ ಎಂದರು.

ವಿಪಕ್ಷ ನಾಯಕ ಆರ್‌.ಅಶೋಕ್‌ ಬಿಡಿಎ ವಶಪಡಿಸಿಕೊಂಡ ಜಮೀನನ್ನು 22 ವರ್ಷದ ಬಳಿಕ ಡಿನೋಟಿಫಿಕೇಶನ್‌ ಮಾಡಿಸಿ, ಡಿನೋಟಿಫಿಕೇಶನ್‌ ಮೊದಲೇ ಬಿಡಿಎ ಜಮೀನನ್ನೇ ಯಾರದ್ದೋ ಹೆಸರಿನಲ್ಲಿ ಖರೀದಿ ಮಾಡಿದ್ದಾರೆ. ಇವರು ಮಾಡಿರೋದು ನ್ಯಾಯಾನಾ? ಇವರದ್ದು ಯಾವ ಸೀಮೆ ನ್ಯಾಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next