Advertisement

ದಲಿತರನ್ನು ಸಿಎಂ ಮಾಡಲಿ ಎಂದಿರುವ ಸಿದ್ದುಗೆ ಬಿಜೆಪಿ ಗುದ್ದು  

01:24 PM Jul 23, 2021 | Team Udayavani |

ಬೆಂಗಳೂರು: ದಲಿತರನ್ನು ಸಿಎಂ ಮಾಡಲಿ ಎಂದು ಸವಾಲು ಹಾಕಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಬಿಜೆಪಿ ಖಡಕ್ ತಿರುಗೇಟು ಕೊಟ್ಟಿದೆ.

Advertisement

ಇಂದು (ಜುಲೈ.23) ಟ್ವಿಟ್ ಮೂಲಕ ಬಿಸಿ ಮುಟ್ಟಿಸಿರುವ ಬಿಜೆಪಿ, ದಲಿತನೊಬ್ಬ ಸಿಎಂ ಆಗಬಾರದು ಎಂದು ಪರಮೇಶ್ವರ್‌ ಅವರನ್ನು ಸೋಲಿಸಿದ ಸಿದ್ದರಾಮಯ್ಯ ಈಗ ದಲಿತ ಪ್ರೇಮ ತೋರ್ಪಡಿಸುತ್ತಿದ್ದಾರೆ. ಸಿದ್ದರಾಮಯ್ಯ ಅವರು  ʼದಲಿತ ಮುಖ್ಯಮಂತ್ರಿʼ ವಿಚಾರದಲ್ಲಿ ಮಾತನಾಡುವುದೂ ಒಂದೇ, ಗಾಂಧಿ ಕುಡಿಗಳು ʼಕುಟುಂಬ ರಾಜಕಾರಣʼದ ಬಗ್ಗೆ ಪ್ರವಚನ ನೀಡುವುದೂ ಒಂದೇ ಎಂದು ಟೀಕಿಸಿದೆ.

ಮತ್ತೊಂದು ಟ್ವಿಟ್ ನಲ್ಲಿ ‘ಸಿದ್ದರಾಮಯ್ಯನವರೇ, ದಲಿತರ ಬಗ್ಗೆ ನಿಮಗೆ ನಿಜಕ್ಕೂ ಕಾಳಜಿ ಇದ್ದರೆ ದಲಿತ ಸಮುದಾಯಕ್ಕೆ ಸೇರಿದವರನ್ನು ಪಕ್ಷದ ಮುಂದಿನ ಮುಖ್ಯಮಂತ್ರಿ ಎಂದು ಈಗಲೇ ಘೋಷಿಸಿ. ಅದೆಲ್ಲ ಹೇಗೆ ಸಾಧ್ಯ, ʼನಾನೇ ಮುಂದಿನ ಸಿಎಂʼ ಎಂದು ಹೇಳಿಸಿಕೊಳ್ಳುವುದರಲ್ಲೇ ನೀವು ಬ್ಯುಸಿ ಆಗಿದ್ದೀರಿ ಅಲ್ವೇ? ತಿರುಗೇಟು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next