Advertisement

ಬಿಜೆಪಿಯಿಂದ “ಘರ್‌ ಘರ್‌ ಜೋಡೋ’ಅಭಿಯಾನ

10:57 PM Mar 06, 2023 | Team Udayavani |

ಹೊಸದಿಲ್ಲಿ: ಕಾಂಗ್ರೆಸ್‌ನ “ಭಾರತ್‌ ಜೋಡೋ’ ಯಾತ್ರೆ ಪೂರ್ಣಗೊಂಡ ಬೆನ್ನಲ್ಲೇ ಈಗ ಬಿಜೆಪಿ ದಲಿತ ಸಮುದಾಯವನ್ನು ಕೇಂದ್ರೀಕರಿಸಿಕೊಂಡು “ಘರ್‌ ಘರ್‌ ಜೋಡೋ'(ಮನೆ ಮನೆ ಜೋಡಿಸಿ) ಅಭಿಯಾನ ಕೈಗೊಳ್ಳಲು ನಿರ್ಧರಿಸಿದೆ.

Advertisement

ಅಂಬೇಡ್ಕರ್‌ ಜಯಂತಿಯ ದಿನವಾದ ಎ. 14ರಂದು ಆರಂಭವಾಗುವ ಯಾತ್ರೆ 21 ದಿನಗಳ ಕಾಲ ನಡೆಯಲಿದ್ದು, ಬುದ್ಧ ಜಯಂತಿಯಂದು ಅಂದರೆ ಮೇ 5ರಂದು ಕೊನೆಗೊಳ್ಳಲಿದೆ. ಈ ಅಭಿಯಾನಕ್ಕೆ ಬಿಜೆಪಿ ಎಸ್‌ಸಿ ಮೋರ್ಚಾ 11 ಸದಸ್ಯರ ರಾಷ್ಟ್ರೀಯ ಸಮಿತಿಯನ್ನು ರಚಿಸಿದೆ. ಅದೇ ರೀತಿ ತಲಾ 11 ಸದಸ್ಯರ ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಮಿತಿಗಳನ್ನೂ ರಚಿಸಲಾಗಿದೆ.

ಪರಿಶಿಷ್ಟ ಜಾತಿಗೆ ಸರಕಾರದ ಎಲ್ಲ ಕಲ್ಯಾಣ ಯೋಜನೆಗಳನ್ನು ತಲುಪಿಸುವುದೇ ಇದರ ಉದ್ದೇಶ. ಅದರಂತೆ ಎಲ್ಲ ಕಾಲನಿಗಳು, ಸ್ಲಂಗಳೂ ಸೇರಿದಂತೆ ಪ್ರತೀ ಮನೆ ಮನೆಗೆ ತೆರಳಿ, ಅರ್ಜಿಗಳನ್ನು ಭರ್ತಿ ಮಾಡಿಸಿ ಸರಕಾರದ ಯೋಜನೆಗಳ ಲಾಭ ಸಿಗುವಂತೆ ಮಾಡಲಾಗುತ್ತದೆ ಎಂದು ಬಿಜೆಪಿ ಎಸ್‌ಸಿ ಮೋರ್ಚಾ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next