Advertisement

ಕಾಳಿಯನ್ನು ಪೂಜಿಸಲು ಬಿಜೆಪಿಯಿಂದ ಕಲಿಯಬೇಕಾಗಿಲ್ಲ: ಮಹುವಾ ಮೊಯಿತ್ರಾ

07:32 PM Jul 08, 2022 | Team Udayavani |

ಕೋಲ್ಕತಾ : ಇತ್ತೀಚೆಗೆ ಕಾಳಿ ದೇವಿಯ ಬಗ್ಗೆ ವಿವಾದಾತ್ಮಕ ಹೇಳಿಕೆಗಳ ಕುರಿತು ಬಿಜೆಪಿಯಿಂದ ಟೀಕೆಗಳನ್ನು ಎದುರಿಸುತ್ತಿರುವ ತೃಣಮೂಲ ಕಾಂಗ್ರೆಸ್ ಸಂಸದೆ ಮಹುವಾ ಮೊಯಿತ್ರಾ ಅವರು ತಿರುಗೇಟು ನೀಡಿದ್ದಾರೆ. ಬಿಜೆಪಿ ಹಿಂದೂ ದೇವತೆಗಳ ಪಾಲಕನಲ್ಲ ಮತ್ತು ಅದು ದೇವಿಯನ್ನು ಹೇಗೆ ಪೂಜಿಸಬೇಕು ಎಂಬುದನ್ನು ಬಂಗಾಳಿಗಳಿಗೆ ಕಲಿಸಬೇಕಾಗಿಲ್ಲ ಎಂದು ಪ್ರತಿಪಾದಿಸಿದ್ದಾರೆ.

Advertisement

ಕಳೆದ 2,000 ವರ್ಷಗಳಿಂದ ಚಾಲ್ತಿಯಲ್ಲಿರುವ ವಿಭಿನ್ನ ಆಚರಣೆಗಳನ್ನು ಹೊಂದಿರುವ ದೇಶದ ಇತರ ಭಾಗಗಳ ಜನರ ಮೇಲೆ ಉತ್ತರ ಭಾರತದಲ್ಲಿ ದೇವತೆಗಳನ್ನು ಪೂಜಿಸುವ ವಿಧಾನಗಳ ಆಧಾರದ ಮೇಲೆ ಬಿಜೆಪಿ ತನ್ನ ಅಭಿಪ್ರಾಯಗಳನ್ನು ಹೇರಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.

ಮೊಯಿತ್ರಾ ಅವರು ಗುರುವಾರ ರಾತ್ರಿ ಬಂಗಾಳಿ ಸುದ್ದಿ ವಾಹಿನಿಯೊಂದಕ್ಕೆ ಮಾತನಾಡುತ್ತಾ, “ಹಿಂದುತ್ವದ ತನ್ನ ಅಜೆಂಡಾವನ್ನು ಹೇರುವ ಮತ್ತು ಇತರ ಜನಾಂಗೀಯ ಗುಂಪುಗಳ ಮೇಲೆ ತನ್ನ ಏಕಶಿಲೆಯ ದೃಷ್ಟಿಕೋನಗಳನ್ನು ಹೇರುವುದು ಬಿಜೆಪಿಯ ಪ್ರಯತ್ನವಾಗಿರುವುದರಿಂದ ಈ ವಿಷಯದ ಬಗ್ಗೆ ಮಾತನಾಡುವ ಮೂಲಕ ತಾನು “ಪ್ರಬುದ್ಧ ರಾಜಕಾರಣಿ” ಯಾಗಿ ವರ್ತಿಸಿದ್ದೇನೆ ಎಂದು ಹೇಳಿದರು.

ತನಗೆ ಒಬ್ಬ ವ್ಯಕ್ತಿಯಾಗಿ ದೇವರನ್ನು ಮಾಂಸಾಹಾರ ಮತ್ತು ಮದ್ಯವನ್ನು ಸ್ವೀಕರಿಸುವ ದೇವತೆ ಎಂದು ಬಿಂಬಿಸಲು ಎಲ್ಲ ಹಕ್ಕಿದೆ ಎಂದು ಹೇಳುವ ಮೂಲಕ ವಿವಾದವನ್ನು ಹುಟ್ಟುಹಾಕಿದ್ದರು. ಆಕೆಯ ವಿಶಿಷ್ಟವಾದ ಪ್ರಾರ್ಥನೆಯ ವಿಧಾನ, ಸಿಗರೇಟ್ ಹಿಡಿದಿರುವ ಕಾಳಿಯ ಚಿತ್ರದ ಪೋಸ್ಟರ್‌ ಆಕ್ರೋಶಕ್ಕೆ ಗುರಿಯಾಗಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next