Advertisement

ಹೆರಾಲ್ಡ್‌ ಪ್ರಕರಣ: ಕಾಂಗ್ರೆಸ್‌ ಪ್ರತಿಭಟನೆ ಸರಿಯಲ್ಲ

03:33 PM Jun 25, 2022 | Team Udayavani |

ಪಾಂಡವಪುರ: ಕಾಂಗ್ರೆಸ್‌ನ ಸೋನಿಯಾಗಾಂಧಿ, ರಾಹುಲ್‌ ಗಾಂಧಿ ಅವರನ್ನು ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆ ಹೆಸರಿನಲ್ಲಿ ಹಣ ವ್ಯವಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ. ವಿಚಾರಣೆ ನಡೆಸುತ್ತಿದೆ. ಈ ವಿಚಾರವನ್ನು ಜನರ ಮನಸ್ಸಿನಿಂದ ದೂರ ವಿಡಲು ಕಾಂಗ್ರೆಸ್‌ ಪ್ರತಿಭಟನೆ ಮಾಡುತ್ತಿದೆ ಎಂದು ವಿಧಾನ ಪರಿಷತ್‌ ಮುಖ್ಯ ಸಚೇತಕ ಡಾ.ವೈ.ಎ.ನಾರಾಯಣಸ್ವಾಮಿ ಹೇಳಿದರು.

Advertisement

ಹಣ ವ್ಯವಹರಿಸಿದ ವಿಚಾರಕ್ಕೆ ಇ.ಡಿ. ಸಂಸ್ಥೆ ವಿಚಾರಣೆ ನಡೆಸುವುದೇ ತಪ್ಪು ಎಂಬುದು ಕಾಂಗ್ರೆಸ್‌ ಪಕ್ಷದ ಅಭಿಪ್ರಾಯವಾಗಿದೆ ಎಂದು ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

ಕ್ರಮಕೈಗೊಳ್ಳದೇ ನಿರ್ಲಕ್ಷ್ಯ: ಪಠ್ಯ ಪರಿಷ್ಕರಣೆ ಸಮಿತಿ ಅಧ್ಯಕ್ಷರಾಗಿದ್ದ ರೋಹಿತ್‌ ಚಕ್ರತೀರ್ಥ ಅವರು ನಾಡಗೀತೆಯನ್ನು ಬೇರೆ ರೀತಿ ವ್ಯಾಖ್ಯಾನಿಸಿದ ಬರಹವನ್ನು ಫಾರ್ವಡ್‌ ಮಾಡಿದ್ದು, 2017ರಲ್ಲಿ ಆಗ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿದ್ದರೂ. ಆಗ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ಮಾಡಿದ್ದರು ಎಂದು ಕಿಡಿಕಾರಿದರು.

ಹಿಂದೂ ರಾಜರ ಕಡೆಗಣನೆ: ಮಕ್ಕಳಿಗೆ ಬೋಧಿಸುವ ಸಮಾಜ ವಿಜ್ಞಾನ ಪಠ್ಯ ಪರಿಸರ ಸೌಂದರ್ಯ, ಸಾಂಸ್ಕೃತಿಕ ವ್ಯವಸ್ಥೆ ಬಲ ಪಡಿ ಸುವ ಜತೆಗೆ ದೇಶದ ಘನತೆಯನ್ನು ಹೆಚ್ಚಿಸುವ ವಿಚಾರಗಳನ್ನು ಒಳಗೊಂಡಿರಬೇಕು. ಆದರೆ, ಬರಗೂರು ರಾಮಚಂದ್ರಪ್ಪ ಅಧ್ಯಕ್ಷತೆಯಲ್ಲಿ ಪರಿಷ್ಕರಣೆಗೊಂಡ ಪಠ್ಯದಲ್ಲಿ ಟಿಪ್ಪು ಸುಲ್ತಾನ್‌, ಘಜಿನಿ ಮಹಮ್ಮದ್‌, ಹುಮಾಯೂನ್‌, ಮೊಗಲರು, ನಿಜಾಮರ ದೊರೆಗಳನ್ನು ವೈಭವೀಕರಿಸಿ, ಹಿಂದೂ ರಾಜರಾದ ಛತ್ರಪತಿ ಶಿವಾಜಿ, ಮಹಾರಾಣ ಪ್ರತಾಪಸಿಂಹ, ವಿಜಯನಗರ ಅರಸುಗಳನ್ನು ಕಡಗಣಿಸಲಾಗಿತ್ತು ಎಂದು ಆರೋಪಿಸಿದರು.

ಹಿಂದೂ ಎಂಬ ಶಬ್ಧವನ್ನು ಅತ್ಯಂತ ಕೆಳಮಟ್ಟಕ್ಕೆ ಇಳಿಸಿದರು. ಮೈಸೂರು ರಾಜಮನೆತನದ ಅಧಿದೇವತೆ ಚಾಮುಂಡೇಶ್ವರಿ, ಒಡೆಯರ್‌ ಅವರ ವಿಚಾರ ತಿಳಿಸುವ ಪಠ್ಯಗಳನ್ನು ಸಿದ್ದರಾಮಯ್ಯ ಅವರ ಅಧಿಕಾರಾವಧಿಯಲ್ಲಿ ಪರಿಷ್ಕರಣೆಗೊಂಡ ಪಠ್ಯದಲ್ಲಿ ಕೈಬಿಡಲಾಗಿತ್ತು ಎಂದು ಆರೋಪಿಸಿದರು.

Advertisement

ಹಲವು ಯೋಜನೆ ಜಾರಿ: ರಾಜ್ಯದ ಹಳೇ ಮೈಸೂರು ಪ್ರಾಂತ್ಯ ದಲ್ಲಿ ಬಿಜೆಪಿ ನೆಲೆಗಟ್ಟಿಗೊಳ್ಳಬೇಕು, 2023ಕ್ಕೆ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯುವ ನಿಟ್ಟಿನಲ್ಲಿ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿ ಬೂತ್‌ ಸಶಸ್ತ್ರೀಕರಣ ಕಾರ್ಯಕ್ರಮ ನಡೆಸಲಾಗುತ್ತಿದೆ. ಬಿಜೆಪಿ ರೈತರ ಪರವಾಗಿದ್ದು, ಯಾರ ಬಳಿಯೂ ಕೈವೊಡ್ಡಬಾರದು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಕಿಸಾನ್‌ ಸಮ್ಮಾನ್‌ ಯೋಜನೆ, ವಿದ್ಯಾನಿಧಿ ಯೋಜನೆ ಜಾರಿಗೊಳಿಸಿದ್ದಾರೆ ಎಂದು ಹೇಳಿದರು.

ಉಚಿತ ಪಡಿತರ ಮುಂದುವರಿದಿದೆ: ಅದೇರೀತಿ ಪ್ರತಿಯೊಬ್ಬರಿಗೂ ಉತ್ಕೃಷ್ಟ ಆರೋಗ್ಯ ಸೇವೆ ಒದಗಿಸಿಲು ಆಯುಷ್ಮಾನ್‌ ಯೋಜನೆ ರೂಪಿಸಿದರು. ಮೋದಿ ಅವರ ಯೋಜನೆಗಳು ಇಲ್ಲದ ಒಂದೇ ಒಂದು ಮನೆಯನ್ನು ದೇಶದಲ್ಲಿ ಕಾಣಲು ಸಾಧ್ಯ ವಿಲ್ಲ. ಕೊರೊನಾ ಸಂಕಷ್ಟದಲ್ಲಿ ಪ್ರಾರಂಭವಾದ ಉಚಿತ ಪಡಿತರ ಈಗಲೂ ಮುಂದುವರಿದಿದೆ, ಮುಂದೆಯೂ ಇರು ತ್ತದೆ ಎಂದು ತಿಳಿಸಿದರು.

ಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಾ.ಎನ್‌.ಎಸ್‌.ಇಂದ್ರೇಶ್‌, ಕೆ.ಎಲ್‌.ಆನಂದ್‌, ಮಧು ಗಂಗಾಧರ್‌, ಗ್ರಾಪಂ ಸದಸ್ಯ ಕಾಂತರಾಜು, ತಾಪಂ ಮಾಜಿ ಸದಸ್ಯೆ ಮಂಗಳಾ, ಕ್ಷೇತ್ರಾ ಧ್ಯಕ್ಷ ಎಲ್‌.ಅಶೋಕ್‌, ಕಾರ್ಯದರ್ಶಿ ನೀಲನಹಳ್ಳಿ ಧನಂಜಯ, ರಾಜೀವ್‌ ತಮ್ಮಣ್ಣ, ಪುರಸಭೆ ಸದಸ್ಯ ಶ್ರೀನಿವಾಸ್‌ ನಾಯಕ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next