Advertisement

ಪರಿಷತ್ ಅಭ್ಯರ್ಥಿ ಹೇಮಲತಾ ನಾಯಕ್ ಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದ ಬಿಜೆಪಿ

02:01 PM May 24, 2022 | Team Udayavani |

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾದ ಮಂಗಳವಾರದಂದೇ ಟಿಕೆಟ್ ಅಂತಿಮವಾದ ಕಾರಣ ಬಿಜೆಪಿ ಅಭ್ಯರ್ಥಿ ಹೇಮಲತಾ ನಾಯಕ್ ಪರದಾಟ ಪಡಬೇಕಾಯಿತು.

Advertisement

ನಾಮಪತ್ರ ಸಲ್ಲಿಕೆ ಮಾಡಲು ಬೆಂಗಳೂರಿಗೆ ಬರಬೇಕಿತ್ತು. ಚುನಾವಣೆ ಟಿಕೆಟ್ ಖಚಿತವಾದ ಮಾಹಿತಿ ಪಡೆದ ಹೇಮಲತಾ ನಾಯಕ್ ಕೊಪ್ಪಳದಿಂದ ಹೊರಟಿದ್ದರು. ಆದರೆ ರಸ್ತೆ ಮಾರ್ಗದಲ್ಲಿ ಬೆಂಗಳೂರು ತಲುಪುವುದು ತಡವಾಗುತ್ತದೆ ಎಂದು ಬಿಜೆಪಿ ಹೆಲಿಕಾಪ್ಟರ್ ವ್ಯವಸ್ಥೆ ಮಾಡಿದೆ.

ಇದನ್ನೂ ಓದಿ:ತಪ್ಪಿದ ಪರಿಷತ್ ಟಿಕೆಟ್: ಕಾರ್ಯಕರ್ತರಿಗೆ ಸುದೀರ್ಘ ಪತ್ರ ಬರೆದ ವಿಜಯೇಂದ್ರ

ಹೇಮಲತಾ ನಾಯಕ್ ಅವರು ಕೊಪ್ಪಳದಿಂದ ತುಮಕೂರಿನವರೆಗೆ ಕಾರಿನಲ್ಲಿ ಬಂದಿದ್ದರು. ತುಮಕೂರಿನಿಂದ ಜಕ್ಕೂರು ಏರೋಡ್ರಂವರೆಗೆ ಹೆಲಿಕಾಪ್ಟರ್ ವ್ಯವಸ್ಥೆ ಮಾಡಲಾಗಿದೆ. ತುಮಕೂರಿನಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಬಂದು ಹೇಮಲತಾ ನಾಯಕ್ ನಾಮಪತ್ರ ಸಲ್ಲಿಸಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next