Advertisement

ಇಂದಿನಿಂದ ಬಿಜೆಪಿ ಮುಸ್ಲಿಂ ಸಂಪರ್ಕ ಅಭಿಯಾನ

08:07 PM Mar 09, 2023 | Team Udayavani |

ಶ್ರೀನಗರ: ದೇಶಾದ್ಯಂತ ಮುಸ್ಲಿಂ ಸಮುದಾಯದ ಮುಖಂಡರ ಜತೆಗೆ ಸಂಪರ್ಕ ಮಾಡಿ, ವಿಶ್ವಾಸ ಗಳಿಸುವ ಕಾರ್ಯಕ್ರಮವನ್ನು ಮಾ.10ರಂದು ಬಿಜೆಪಿ ಶುರು ಮಾಡಲಿದೆ. ದೇಶದ 64 ಜಿಲ್ಲೆಗಳಲ್ಲಿ ಬಿಜೆಪಿಯ ಅಲ್ಪಸಂಖ್ಯಾತ ಮೋರ್ಚಾ ಈ ಕಾರ್ಯಕ್ರಮ ನಡೆಸಿಕೊಡಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಸ್ಲಿಂ ಸಂಘಟನೆಗಳ ಜಮ್ಮು ಮತ್ತು ಕಾಶ್ಮೀರದ ಮುಖ್ಯಸ್ಥ ಮುಫ್ತಿ ನಾಸಿರ್‌ ಉಲ್‌ ಇಸ್ಲಾಂ, ಇದೊಂದು ಸ್ವಾಗತಾರ್ಹ ಕ್ರಮ ಎಂದು ಹೇಳಿದ್ದಾರೆ.

Advertisement

ಈ ಬಗ್ಗೆ “ಪಿಟಿಐ’ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, “ಜಮ್ಮು ಮತ್ತು ಕಾಶ್ಮೀರದಲ್ಲಿ ಇರುವ ಮುಸ್ಲಿಮರು ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ದೇಶದ ಇತರ ಭಾಗಗಳಲ್ಲಿ ಸಮುದಾಯದವರಿಗೆ ಮತ್ತಷ್ಟು ಭದ್ರತೆಯ ಭಾವನೆ ಬರುವಂತೆ ಮಾಡಬೇಕಾಗಿದೆ’ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next