Advertisement

ರಮೇಶಕುಮಾರ ಹೇಳಿಕೆಗೆ ಬಿಜೆಪಿ ಮೋರ್ಚಾ ಖಂಡನೆ

12:52 PM Dec 20, 2021 | Team Udayavani |

ಶಹಾಬಾದ: ವಿಧಾನಸಭೆ ಅಧಿವೇಶನದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿರುವ ಮಾಜಿ ಸಭಾಪತಿ ರಮೇಶಕುಮಾರ ಅವರನ್ನು ಪಕ್ಷದಿಂದಲೇ ವಜಾಗೊಳಿಸಬೇಕೆಂದು ಆಗ್ರಹಿಸಿ ಶನಿವಾರ ಬಿಜೆಪಿ ಮಹಿಳಾ ಮೋರ್ಚಾದಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

Advertisement

ಮೋರ್ಚಾ ಜಿಲ್ಲಾಧ್ಯಕ್ಷ ಭಾಗಿರಥಿ ಗುನ್ನಾಪುರ ಮತ್ತು ನಗರಾಧ್ಯಕ್ಷೆ ಜಯಶ್ರೀ ಸೂಡಿ ನೇತೃತ್ವದಲ್ಲಿ ನಗರದ ನೆಹರು ವೃತ್ತದಲ್ಲಿ ಪ್ರತಿಭಟನೆ ನಡೆಸಿ ಘೋಷಣೆ ಕೂಗಲಾಯಿತು. ನಂತರ ತಹಶೀಲ್ದಾರ್‌ ಸುರೇಶ ವರ್ಮಾಗೆ ಮನವಿ ಸಲ್ಲಿಸಲಾಯಿತು.

ರಮೇಶಕುಮಾರ ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಇಡೀ ಮಹಿಳಾ ಸಮಾಜಕ್ಕೆ ಅವಮಾನಿಸಿದ್ದಾರೆ. ಹಿರಿಯ ಮುತ್ಸದ್ಧಿ ರಾಜಕಾರಣಿಯಾಗಿ ಅತ್ಯಾಚಾರಕ್ಕೆ ಸಂಬಂಧಿಸಿದಂತೆ ಆಡಿರುವ ಮಾತುಗಳಿಂದ ಪ್ರಜ್ಞಾವಂತ ಸಮಾಜ ತಲೆ ತಗ್ಗಿಸುವಂತೆ ಆಗಿದೆ. ಹೇಳಿಕೆ ನೀಡಿ ಕ್ಷಮೆಯಾಚಿಸಿದ್ದಾರೆ. ಆದರೆ ಇಂತಹ ಹೇಳಿಕೆ ನೀಡಿದ್ದೇ ತಪ್ಪು. ಅವರನ್ನು ಪಕ್ಷದಿಂದಲೇ ವಜಾಗೊಳಿಸಿ ಎಂದು ಒತ್ತಾಯಿಸಿದರು.

ಮುಖಂಡರಾದ ಆರತಿ, ಸುನೀತಾ, ಸಂತೋಷಿ, ಸರಸ್ವತಿ, ಶ್ರೀದೇವಿ, ಮಂಜುಳಾ, ಮೆಹಬೂಬೆ, ಲಾಲಬಿ, ಸಯ್ಯದಾ ಬಿ., ಲಕ್ಷ್ಮೀಬಾಯಿ, ಶೋಭಾ, ಮಹಾದೇವಿ, ಬಸಮ್ಮ, ನಾದಾ, ಜಯಶ್ರೀ ಜಿ., ಗಂಗಮ್ಮ, ಮಹಾಂತಮ್ಮ, ಅನುಪಮಾ, ಪ್ರಗತಿ, ಜಗದೇವಿ, ಪ್ರೇಮಾ, ಭದ್ರಸೇನಾ, ಯಾಸ್ಮಿನ್‌, ಕನಕಪ್ಪ ದಂಡಗುಲಕರ್‌, ದಿನೇಶ ಗೌಳಿ, ವಿರೇಶ ಬಂದಳ್ಳಿ, ದೇವೆಂದ್ರಪ್ಪ ಯಲಗೋಡಕರ್‌, ಸದಾನಂದ ಕುಂಬಾರ, ಸುಭಾಷ ಜಾಪೂರ, ಬಸವರಾಜ ಬಿರಾದಾರ, ಶಿವಾಜಿ, ಸಂಜಯ ವಿಟಕರ್‌, ಜಗದೀಶ ಪಾಟೀಲ ಹಾಗೂ, ಮುಖಂಡರು ಬಿಜೆಪಿ ಕಾರ್ಯಕರ್ತರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next