Advertisement

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

01:43 AM Apr 19, 2024 | Team Udayavani |

ಕಣ್ಣೂರ್‌: ಬಿಜೆಪಿ ಸರಕಾರದ ನೀತಿಗಳು, ಸಿದ್ಧಾಂತ ವನ್ನು ಟೀಕಿಸುತ್ತಿರುವುದರಿಂದ ಬಿಜೆಪಿಯ ಕೆಲವು ಮಾಧ್ಯಮ ಸಂಸ್ಥೆಗಳು ನನ್ನನ್ನು ನಿರಂತರ ನಿಂದಿಸುವ ಕೆಲಸ ಮಾಡುತ್ತಿವೆ. ಕೇಂದ್ರ ಸರಕಾರದ ಜತೆಗೂಡಿ ನನ್ನ ವರ್ಚಸ್ಸು ಕುಂದಿಸಲು ಯತ್ನಿಸುತ್ತಿವೆ ಎಂದು ರಾಹುಲ್‌ ಗಾಂಧಿ ಹೇಳಿದರು.

Advertisement

ಕೇರಳದ ಕಣ್ಣೂರಿನಲ್ಲಿ ಚುನಾವಣ ಸಭೆಯಲ್ಲಿ ಮಾತನಾಡಿ, ಬಿಜೆಪಿ - ಆರೆಸ್ಸೆಸ್‌ ವಿರುದ್ಧ ನಿತ್ಯ ಹೋರಾಡುತ್ತೇನೆ. ಪ್ರತೀ ದಿನ ಬೆಳಗ್ಗೆ ಎದ್ದಾಗ ನಾನು ಹೇಗೆ ಅವರಿಗೆ ಡಿಸ್ಟರ್ಬ್ ಮಾಡಲಿ ಎಂದು ಯೋಚಿಸುತ್ತೇನೆ. ಬಿಜೆಪಿಯ ಮಾಧ್ಯಮಗಳು 24 ಗಂಟೆಯೂ ನನ್ನನ್ನು ದೂಷಿಸುತ್ತವೆ. ದೇಶಾದ್ಯಂತ ನನ್ನ ಇಮೇಜ್‌ ಹಾಳು ಮಾಡಲೆತ್ನಿಸುತ್ತಿವೆ ಎಂದರು.

ಈ ಚುನಾವಣೆಯು ಸಂವಿಧಾನದ ಉಳಿವಿನ ಹೋರಾಟ
ಹೊಸದಿಲ್ಲಿ: ಇದು ಸಾಮಾನ್ಯ ಚುನಾವಣೆ ಅಲ್ಲ, ಸಂವಿ ಧಾನವನ್ನು ಹಾಗೂ ಭಾರತದ ಪ್ರಜಾಪ್ರಭುತ್ವ ವನ್ನು ಉಳಿಸಲು ನಡೆಯುತ್ತಿರುವ ಚುನಾವಣೆ. ಈ ನಿರ್ಣಾಯಕ ಘಟ್ಟದಲ್ಲಿ ಬಿಜೆಪಿ ಹೇಗೆ ದೇಶದ ಚಿಂತ ನೆಗಳನ್ನು ನಾಶ ಪಡಿಸುತ್ತಿದೆ ಎಂಬುದನ್ನು ಜನರಿಗೆ ತಿಳಿಸಿ ಎಂದು ಕಾಂಗ್ರೆಸ್‌ ಸಂಸದ ರಾಹುಲ್‌ ಗಾಂಧಿ ತಮ್ಮ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ಮೊದಲ ಹಂತದ ಲೋಕಸಭೆ ಚುನಾವಣೆಯ ಮುನ್ನಾ ದಿ ನ  ಗುರು ವಾರ ವೀಡಿಯೋ ಸಂದೇಶದ ಮೂಲಕ ರಾಹುಲ್‌ ಗಾಂಧಿ ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದು, ನೀವು ನಮ್ಮ ಪಕ್ಷದ ಬೆನ್ನೆಲುಬು. ಸಂವಿಧಾನದ ಉಳಿವಿಗಾಗಿ ನಡೆಯುತ್ತಿರುವ ಈ ಚುನಾವಣೆಯಲ್ಲಿ ನಿಮ್ಮಂಥ ಕಾರ್ಯಕರ್ತರಿಗೆ ಜವಾಬ್ದಾರಿ ಹೆಚ್ಚು. ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಈ ದೇಶದ ಸಿದ್ಧಾಂತಗಳಿಗೆ ವಿರುದ್ಧವಾಗಿವೆ’ ಎಂದಿದ್ದಾರೆ.

ಅಮೇಠಿಯಲ್ಲಿ ಸ್ಪರ್ಧೆಗೆ ರಾಗಾಗೆ ಧೈರ್ಯ ಇಲ್ಲ: ರಾಜನಾಥ್‌ ಸಿಂಗ್‌
2019ರಲ್ಲಿ ಸೋತ ಬಳಿಕ ಮತ್ತೆ ಅಮೇಠಿ ಕ್ಷೇತ್ರದಲ್ಲಿ ಸ್ಪರ್ಧಿಸುವ ಧೈರ್ಯವನ್ನು ರಾಹುಲ್‌ ಗಾಂಧಿ ಮಾಡುತ್ತಿಲ್ಲ. ಆದರೆ ಈ ಬಾರಿ ವಯ ನಾಡಿನಲ್ಲೂ ಅವರಿಗೆ ಸೋಲು ಎದುರಾಗಲಿದೆ ಎಂದು ಎಂದು ಕೇಂದ್ರ ಸಚಿವ ರಾಜನಾಥ್‌ ಸಿಂಗ್‌ ಕೇರಳದ ಪ್ರಚಾರ ಸಭೆಯಲ್ಲಿ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next