Advertisement

ಮಂಗಲ್ಪಾಡಿ ಗ್ರಾ.ಪಂ. ದುರಾಡಳಿತದ ವಿರುದ್ಧ ಬಿಜೆಪಿ ಮಾರ್ಚ್‌

05:54 PM Sep 14, 2020 | mahesh |

ಕುಂಬಳೆ: ಮಂಗಲ್ಪಾಡಿ ಗ್ರಾಮ ಪಂಚಾಯತ್‌ ಮುಸ್ಲಿಂಲೀಗ್‌ ದುರಾಡಳಿತದ ಮತ್ತು ಮತದಾರ ಪಟ್ಟಿಯಲ್ಲಿ ಎಸಗಿದ ಅಕ್ರಮದ ವಿರುದ್ಧ ಬಿಜೆಪಿ ಮಂಗಲ್ಪಾಡಿ ಪಂಚಾಯತ್‌ ಸಮಿತಿ ವತಿಯಿಂದ ಗ್ರಾಮ ಪಂಚಾಯತ್‌ ಕಚೇರಿಗೆ ಮಾರ್ಚ್‌ ನಡೆಸಲಾಯಿತು.

Advertisement

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿಜೆಪಿ ಮಂಗಲ್ಪಾಡಿ ಸಮಿತಿ ಅಧ್ಯಕ್ಷ ವಸಂತ ಕುಮಾರ್‌ ಮಯ್ಯ ವಹಿಸಿರು, ಬಿಜೆಪಿ ಜಿಲ್ಲಾ ಸಮಿತಿ ಕಾರ್ಯದರ್ಶಿ ಎಂ. ವಿಜಯ ಕುಮಾರ್‌ ರೈ ಉದ್ಘಾಟಿಸಿ ಮಾತನಾಡಿದರು.

ಬಿಜೆಪಿ ಹಿರಿಯ ನೇತಾರರಾದ ಅಶೋಕ್‌ ಕುಮಾರ್‌ ಹೊಳ್ಳ, ಬಾಬು ಕುಬಣೂರು, ರಾಮಚಂದ್ರ ಬಲ್ಲಾಳ್‌, ಹರಿನಾಥ್‌ ಭಂಡಾರಿ, ಸೀತಾರಾಮ ಶೆಟ್ಟಿ, ಒಬಿಸಿ ಜಿಲ್ಲಾ ಕಾರ್ಯದರ್ಶಿ ಪುಷ್ಪಾಜ್‌ ಐಲ್‌, ಯುವಮೋರ್ಚ ಮಂಡಲ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಉಪಾಧ್ಯಕ್ಷ ಕಿಶೋರ್‌ ಭಗವತಿ, ನೇತಾರರಾದ ಉದಯ ಗಾಂಭಿರ್‌, ರಂಜಿತ್‌ ಶಾರದಾನಗರ, ಕಿಶೋರ್‌ ಬಂದ್ಯೋಡ್‌, ಭಾರತಿ, ಪ್ರಸಾದ್‌ ಬೇಕೂರು, ಪ್ರದೀಪ್‌ ಶೆಟ್ಟಿ, ದೀಪಕ್‌ ಶೆಟ್ಟಿ, ಜಯರಾಮ ಶೆಟ್ಟಿ ಉಳಿಯ, ಪಂಚಾಯತ್‌ ಬಿಜೆಪಿ ಸದಸ್ಯರಾದ ಜಯಶರ್ಮಿಳಾ, ಅನಿತಾ, ಬಾಲಕೃಷ್ಣ ಅಂಬಾರ್‌, ಅವಿನಾಶ್‌ ಪ್ರತಾಪನಗರ, ದೀಕ್ಷಿತ್‌ ಐಲ, ನಾಗೇಶ್‌ ಬೇಕೂರು, ನಿಖೀಲ್‌ರಾಜ್‌, ದಿನೇಶ್‌ ಚೆರುಗೋಳಿ ಸ್ವಾಗತಿಸಿ, ಅನಿಲ್‌ ಐಲ ನೇತೃತ್ವ ವಹಿಸಿದರು. ಪ್ರತಿಭಟನೆಗೆ ಮುನ್ನ ಬಾಯಾರು ಕೈಕಂಬದಿಂದ ಮೆರವಣಿಗೆ ನಡೆಯಿತು.

Advertisement

Udayavani is now on Telegram. Click here to join our channel and stay updated with the latest news.

Next