Advertisement

ನದಿಗೆ ಹಾರಿ ಉದ್ಯಾವರ ಬಿಜೆಪಿ ಮುಖಂಡ ಆತ್ಮಹತ್ಯೆ

06:00 PM Apr 25, 2019 | keerthan |

ಕಾಪು: ರಾಷ್ಟ್ರೀಯ ಹೆದ್ದಾರಿ 66 ರ ಪಾಪನಾಶಿನಿ ನದಿಗೆ ವ್ಯಕ್ತಿಯೋರ್ವರು ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ಬೆಳಗ್ಗೆ ನಡೆದಿದೆ. ಮೃತ ವ್ಯಕ್ತಿಯನ್ನು ಸ್ಥಳಿಯ ಬಿಜೆಪಿ ಮುಖಂಡ, ಉದ್ಯಾವರ ನಿವಾಸಿ ಅಶೋಕ್ ಅಮೀನ್ (35) ಎಂದು ಗುರುತಿಸಲಾಗಿದೆ.

Advertisement

ಗುರುವಾರ ಬೆಳಗ್ಗೆ ಅಶೋಕ್ ಉದ್ಯಾವರ ರಾಷ್ಟ್ರೀಯ ಸೇತುವೆ ಬಳಿ ಬೈಕ್ ನಿಲ್ಲಿಸಿ ಹೊಳೆಗೆ ಹಾರಿದ್ದರು ಎಂದು ಪ್ರತ್ಯಕ್ಷದರ್ಶಿಯೋರ್ವರು ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ್ದ ಕಾಪು ಪೊಲೀಸರು, ಅಗ್ನಿಶಾಮಕ ತಂಡ, ಮತ್ತು ಸ್ಥಳೀಯ ಯುವಕರು ಸೇರಿ ನದಿಯಲ್ಲಿ ಹುಡುಕಾಡಿ ಅಶೋಕ್ ಅವರ ಶವವನ್ನು ಮೇಲಕ್ಕೆತ್ತಿದ್ದಾರೆ.


ಮೃತ ಅಶೋಕ್ ಅವರು ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next