Advertisement

ಬಿಜೆಪಿ ಮುಖಂಡ, ನಿವೃತ್ತ ಡಿಸಿಪಿ ಎಂ ರಂಗಪ್ಪ ನಿಧನ

02:09 PM Jan 09, 2022 | Team Udayavani |

ಬೆಂಗಳೂರು : ನಿವೃತ್ತ ಡಿಸಿಪಿ, ಬಿಜೆಪಿ ನಿವೃತ್ತ ಉದ್ಯೋಗಿಗಳ ಮೋರ್ಚಾದ ಮಾಜಿ ರಾಜ್ಯ ಸಂಚಾಲಕರಾಗಿದ್ದ ಎಂ ರಂಗಪ್ಪ ಅವರು ನಿಧನ ಹೊಂದಿದ್ದಾರೆ.

Advertisement

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದು, ನಿವೃತ್ತ ಉದ್ಯೋಗಿಗಳ ಮೋರ್ಚಾದ ಬಿಜೆಪಿ ಮಾಜಿ ರಾಜ್ಯ ಸಂಚಾಲಕರಾಗಿದ್ದ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಸ್ವಯಂಸೇವಕರಾಗಿದ್ದ, ನಿವೃತ್ತ ಡಿಸಿಪಿ ಎಂ ರಂಗಪ್ಪನವರು ಇಹಲೋಕ ತ್ಯಜಿಸಿದ್ದು, ಅವರ ಆತ್ಮಕ್ಕೆ ಸದ್ಗತಿ ಸಿಗಲಿ ಹಾಗೂ ಅವರ ಕುಟುಂಬಕ್ಕೆ ಈ ದು:ಖ ಭರಿಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಪ್ರಾರ್ಥನೆ ಎಂದು ಬರೆದಿದ್ದಾರೆ.

ರಂಗಪ್ಪ ಅವರು ನಿವೃತ್ತಿಯ ಬಳಿಕ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು. ಅವರ ನಿಧನಕ್ಕೆ ಗಣ್ಯರು ಸಂತಾಪ ಸೂಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next