Advertisement

ಡಿಕೆಶಿ ಮೊದಲು ಕಾಂಗ್ರೆಸ್‌ ಪರಿಸ್ಥಿತಿಯನ್ನು ನೋಡಿಕೊಳ್ಳಲಿ : ಜಗದೀಶ ಶೆಟ್ಟರ

01:15 PM Sep 13, 2021 | Team Udayavani |

ಹುಬ್ಬಳ್ಳಿ: ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್‌ ಪರಿಸ್ಥಿತಿ ಏನಾಗಿದೆ ಎಂಬುದನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಮೊದಲು ಅರ್ಥ ಮಾಡಿಕೊಳ್ಳಲಿ. ಪಕ್ಷದಲ್ಲಿನ ಸಮಸ್ಯೆ ಬಗೆಹರಿಸಿಕೊಳ್ಳಲಿ. ಅದನ್ನು ಬಿಟ್ಟು ಬಿಜೆಪಿ ಬಗ್ಗೆ ಸುಳ್ಳು ಆರೋಪ ಮಾಡುವುದನ್ನು ಬಿಡಲಿ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ ಕಿಡಿಕಾರಿದರು.

Advertisement

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಾಲಿಕೆಗಳ ಚುನಾವಣೆಯಲ್ಲಿ ಯಾವ ರೀತಿ ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದೇವೆ ತೋರಿಸಲಿ. ನಮಗೂ ಚುನಾವಣೆ ಬೇಕಾಗಿರಲಿಲ್ಲ. ಆರು ತಿಂಗಳು ಮುಂದೂಡಿ ಎಂದು ಚುನಾವಣಾ ಆಯೋಗಕ್ಕೆ ಕೋರಿದ್ದೆವು. ಆದರೆ ಚುನಾವಣೆ ನಡೆಸುವುದು, ಬಿಡುವುದು ಆಯೋಗದ ಕೆಲಸ. ಅದು ಸ್ವತಂತ್ರ ಸಂಸ್ಥೆ. ವಾಸ್ತವ ಅರ್ಥಮಾಡಿಕೊಳ್ಳದೆ ರಾಜಕೀಯವಾಗಿ ಮಾತನಾಡುವುದನ್ನು ಬಿಡಲಿ ಎಂದರು.

ಶಾಸಕ ಶ್ರೀಮಂತ ಪಾಟೀಲ ಯಾವ ಅರ್ಥದಲ್ಲಿ ಬಿಜೆಪಿಯವರು ಹಣ ಕೊಡಲು ಬಂದಿದ್ದರು ಎಂದು ಹೇಳಿದ್ದಾರೆ ಗೊತ್ತಿಲ್ಲ. ಬಿಜೆಪಿ ಎಂದೂ ಹಣ ಕೊಟ್ಟು ಶಾಸಕರನ್ನು ಖರೀದಿಸಿಲ್ಲ. ಅದನ್ನು ಮಾಡುವುದೂ ಇಲ್ಲ. ಅಂದಿನ ದಿನಮಾನಗಳಲ್ಲಿ ಅಂತಹ ಕಾರ್ಯ ನಡೆದಿಲ್ಲ. ಹು-ಧಾ ಪಾಲಿಕೆಯಲ್ಲಿ ಬಿಜೆಪಿ ಪರ 45 ಸ್ಥಾನಗಳಿದ್ದು, ಮೂರನೇ ಬಾರಿ ಅಧಿಕಾರ ವಹಿಸಲಿದೆ. ಮಹಾಪೌರ ಮತ್ತು ಉಪ ಮಹಾಪೌರ ಪಕ್ಷದವರೇ ಆಗುತ್ತಾರೆ. ಕಲಬುರ್ಗಿಯಲ್ಲೂ ಜೆಡಿಎಸ್‌ ಬೆಂಬಲದೊಂದಿಗೆ ಅಧಿಕಾರ ವಹಿಸುವ ವಿಶ್ವಾಸವಿದೆ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next