Advertisement

ಬಿಜೆಪಿಯವರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಗೊತ್ತಾಗಿದೆ : ಯುಟಿ ಖಾದರ್

01:12 PM Jun 28, 2021 | Team Udayavani |

ಮಂಗಳೂರು : ಪಡಿತರ ಚೀಟಿ, ಆಹಾರ ಇಲಾಖೆಯ ಸಮಸ್ಯೆ ಪರಿಹರಿಸಲು ಸರಕಾರ ವಿಫಲವಾಗಿದೆ. ಬ್ಯಾಂಕ್ ನಲ್ಲಿ ಸಾಲಕ್ಕೆ ಅರ್ಜಿ ಹಾಕಿದವರದ್ದೂ ಬಿಪಿ ಎಲ್ ರದ್ದಾಗುತ್ತಿದೆ. ಜು.7 ರಂದು ನನ್ನ ಕ್ಷೇತ್ರದ ಜನರಿಗಾಗಿ ಆಹಾರ ಅದಾಲತ್ ನಡೆಸುವೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್ ಹೇಳಿಕೆ ನೀಡಿದ್ದಾರೆ.

Advertisement

ನಗದಲ್ಲಿ ಸಂಚಾರ ಸಮಸ್ಯೆಗೆ ಕಾಮಗಾರಿ ವಿಳಂಬವೇ ಕಾರಣ. ಡಿಸಿಯವರು ಕೂಡಲೆ ಸಭೆ ಕರೆದು ಸಮಸ್ಯೆ ಬಗೆ ಹರಿಸಬೇಕು. ಕಾಲಮಿತಿಯಲ್ಲಿ ಕಾಮಗಾರಿ ಮುಗಿಸಬೇಕು. ಬಸ್ ಸಂಚಾರ ಆರಂಭವಾದಾಗ ಸಮಸ್ಯೆ ಬಿಗಡಾಯಿಸಲಿದೆ ಎಂದರು.

ಬಿಜೆಪಿಯವರು ಹಾಗೂ ಎಲ್ಲರಿಗೂ ಮುಂದೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ ಎಂದು ಗೊತ್ತಾಗಿದೆ. ಅದಕ್ಕಾಗಿ ಕಾಂಗ್ರೆಸ್ ನಲ್ಲಿ ಸಿಎಂ ವಿಚಾರದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಕಾಂಗ್ರೆಸ್ ನಲ್ಲಿ ಒಗ್ಗಟ್ಟಿದೆ ಎಂದರು.

ಗಡಿನಾಡಿನಲ್ಲಿ ಕೇರಳದವರು ಕನ್ನಡ ನಾಮಫಲಕ ತೆಗೆದರೆ ಅದರಿಂದ ಯಾರಿಗೂ ಉಪಯೋಗವಿಲ್ಲ. ಈಗ ಇರುವ ಸೌಹಾರ್ದತೆ ಉಳಿಸಿಕೊಳ್ಳಬೇಕು ಎಂದು ಖಾದರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next