Advertisement

ನಮ್ಮ ಕುಟುಂಬಕ್ಕೇ ಬಿಜೆಪಿ ಟಿಕೆಟ್‌ ಖಚಿತ

06:35 AM Feb 09, 2018 | Team Udayavani |

ಹನೂರು: ನಾಗಪ್ಪ ಕುಟುಂಬ ಆಮಿಷಕ್ಕೆ ಒಳಗಾಗುವ ಕುಟುಂಬವಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ತಮಗೇ ಎಂದು ಮಾಜಿ ಶಾಸಕಿ ಪರಿಮಳಾ ಸ್ಪಷ್ಟಪಡಿಸಿದ್ದಾರೆ.

Advertisement

ಸಾಮಾಜಿಕ ಜಾಲತಾಣಗಳಲ್ಲಿ ಮಾಜಿ ಸಚಿವ ವಿ. ಸೋಮಣ್ಣಗೆ ಹನೂರು ಕ್ಷೇತ್ರದ ಬಿಜೆಪಿ ಟಿಕೆಟ್‌ ಖಚಿತವಾಗಿದೆ ಎಂಬ ವದಂತಿ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿ, ಹನೂರು ಕ್ಷೇತ್ರದಲ್ಲಿ ನಾಗಪ್ಪ ಕುಟುಂಬಸ್ಥರನ್ನು ಹೊರತುಪಡಿಸಿ ಬೇರೆ ಯಾರೇ ಸ್ಪರ್ಧಿಸಿದರೂ ಗೆಲುವು ಸಾಧ್ಯವಿಲ್ಲ ಎಂಬುದು ಪಕ್ಷದ ವರಿಷ್ಠರಿಗೆ ಮನದಟ್ಟಾಗಿದ್ದು, ನಾಗಪ್ಪ ಕುಟುಂಬಕ್ಕೆ ಟಿಕೆಟ್‌ ನೀಡಲು ತೀರ್ಮಾನಿಸಿದ್ದಾರೆ.

ಕ್ಷೇತ್ರದಲ್ಲಿನ ಜನಾಭಿಪ್ರಾಯವನ್ನೂ ವರಿಷ್ಠರು ಪಡೆದಿದ್ದು, ಯಾವುದೇ ಕಾರಣಕ್ಕೂ ಟಿಕೆಟ್‌ ತಮ್ಮ ಕೈ ತಪ್ಪುವುದಿಲ್ಲ ಎಂದು ವಿಶ್ವಾಸದ
ಮಾತುಗಳನ್ನಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next