Advertisement

ಬಿಜೆಪಿ ಸರ್ಕಾರ ರೈತರು ಹಾಗೂ ಮಲೆನಾಡಿಗರ ಪರವಾಗಿಲ್ಲ: ಬೇಳೂರು ಗೋಪಾಲಕೃಷ್ಣ

03:03 PM Nov 09, 2020 | keerthan |

ಶಿವಮೊಗ್ಗ: ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದರೂ, ರೈತರು ಹಾಗೂ ಮಲೆನಾಡಿಗರ ಪರವಾಗಿಲ್ಲ. ಹಸಿರು ಶಾಲು ಹಾಕೊಂಡು ರೈತರ ಹೆಸರಿನಲ್ಲಿ ಯಡಿಯೂರಪ್ಪ ಅಧಿಕಾರ ಸ್ವೀಕರಿಸುತ್ತಾರೆ, ಅದರೆ ರೈತರ ಪರವಾಗಿ ಯಾವುದೇ ಕೆಲಸವನ್ನು ಮಾಡುತ್ತಿಲ್ಲ. ಪ್ರಧಾನಿ ಬಳಿ ಮಾತನಾಡುವ ಗಟ್ಟಿ ಧ್ವನಿ ರಾಜ್ಯದಲ್ಲಿ ಯಾರಿಗೂ ಇಲ್ಲದಾಗಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಹೇಳಿದರು.

Advertisement

ತೀರ್ಥಹಳ್ಳಿಯ ನಡೆಯುತ್ತಿರುವ ಕಸ್ತೂರಿ ರಂಗನ್ ವರದಿ ವಿರೋಧಿ ಪಾದಯಾತ್ರೆಯ ಸಮಾರೋಪ ಸಭೆಯಲ್ಲಿ ಮಾತನಾಡಿದ ಅವರು, ಮಲೆನಾಡಿಗೆ ಮಾರಕ ಆಗಿರುವ ಕಸ್ತೂರಿ ರಂಗನ್ ವರದಿ ಇರುವವರೆಗೂ ನಿದ್ದೆ ಮಾಡುವ ಸ್ಥಿತಿಯಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಲೆನಾಡಿಗರ ಪರವಾಗಿ ಇಲ್ಲ. ನೆರೆ, ಮಳೆ ಹಾನಿಯಾದಾ ಕೋವಿಡ್ ಕಾರಣ ಹೇಳಿ ಯಾರು ಜನರ ಬಳಿ ಹೋಗಲಿಲ್ಲ. ಶಿರಾ, ಆರ್. ಆರ್. ನಗರ ಚುನಾವಣೆಯಲ್ಲಿ ಎಲ್ಲಾ ಮರೆತು ಮತ ಕೇಳೋಕೆ ಆಖಾಡಕ್ಕಿಳಿದಿದ್ದರು ಎಂದು ಟೀಕಿಸಿದರು.

ಕಸ್ತೂರಿ ರಂಗನ್ ವರದಿ ಅನುಷ್ಟಾನಗೊಂಡರೆ ಕತ್ತಿ ಹಿಡಿದುಕೊಂಡು ರೈತರು ಗದ್ದೆಗೆ ಹೋಗಲೂ ಆಗುವುದಿಲ್ಲ. ರೈತರನ್ನು ಭಯೋತ್ಪಾದಕ ರೀತಿಯಲ್ಲಿ ನೋಡುವ ಹಾಗೆ ಈ ಕಾಯ್ದೆ ಮಾಡಲಿದೆ. ಹಾಗಾಗಿ ಮಲೆನಾಡಿಗರು ಈ ವರದಿಯನ್ನು ವಿರೋಧಿಸಲೇಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next