Advertisement

ಬಿಜೆಪಿ ಸೇರಲ್ಲ,ರಾಜೀನಾಮೆ ಕೊಡಲ್ಲ

06:25 AM Sep 17, 2018 | |

ಕೊಪ್ಪಳ: “ನಾನಂತೂ ಬಿಜೆಪಿ ಸೇರಲ್ಲ. ಯಾರೂ ನನಗೆ ಈ ಬಗ್ಗೆ ಆಫ‌ರ್‌ ನೀಡಿಲ್ಲ. ಸರ್ಕಾರ ಭದ್ರವಾಗಿದೆ. ಹಾಗಾಗಿ,
ರಾಜೀನಾಮೆ ನೀಡುವ ಪ್ರಮೇಯವೂ ಬರುವುದಿಲ್ಲ’ಎಂದು ಅರಣ್ಯ ಸಚಿವ ಆರ್‌.ಶಂಕರ್‌ ಸ್ಪಷ್ಟಪಡಿಸಿದ್ದಾರೆ.

Advertisement

ನಗರದಲ್ಲಿ ಭಾನುವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, “ಬಿಜೆಪಿ ನಾಯಕರು ಐದು ವರ್ಷಗಳ ಕಾಲ ಸರ್ಕಾರ ಬೀಳುತ್ತೆ ಎನ್ನುವ ಮಾತನ್ನೇ ಹೇಳಿಕೊಂಡು ಸುತ್ತಾಡುತ್ತಾರೆ. ಬಿಜೆಪಿ ಸೇರಲ್ಲ ಎಂದು ಈಗಾಗಲೇ ಸ್ಪಷ್ಟಪಡಿಸಿದ್ದೇನೆ. ಆದರೂ ಮಾಧ್ಯಮಗಳಲ್ಲಿ ಸುಮ್ಮನೆ ನನ್ನ ಬಗ್ಗೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಇದಕ್ಕೆ ಉತ್ತರ ಕೊಡೋರು ಯಾರು? ಪ್ರತಿಕ್ರಿಯಿಸಿದರೆ ಗೊಂದಲ ಸೃಷ್ಟಿಯಾಗುತ್ತದೆ. ಹೀಗಾಗಿ, ಸದ್ಯಕ್ಕೆ ಸುಮ್ಮನಿದ್ದೇನೆ. ಕ್ಷೇತ್ರದಲ್ಲಿ ವಿರಾಮ ಇಲ್ಲದೇ ನಿರಂತರ ಕೆಲಸ ಮಾಡುತ್ತಿದ್ದೇನೆ’ ಎಂದರು. ಸರ್ಕಾರ ಕೆಡವಲು ಕಿಂಗ್‌ಪಿನ್‌ಗಳು ಯತ್ನಿಸುತ್ತಿದ್ದಾರೆ ಎಂದು ಸಿಎಂ ಹೇಳಿರುವ ವಿಚಾರ ನನಗೆ ಗೊತ್ತಿಲ್ಲ. ಯಾವ ಪಿನ್‌ಗಳು ಕೆಲಸ ಮಾಡುತ್ತಿವೆ ಎನ್ನುವುದೂ ತಿಳಿದಿಲ್ಲ. ಸರ್ಕಾರದ ಅಂಗವಾಗಿ ಕೆಲಸ ಮಾಡುತ್ತಿದ್ದು, ಬೇಡವಾದ ವಿಷಯಕ್ಕೆಲ್ಲ ತಲೆಕೆಡಿಸಿಕೊಳ್ಳಲ್ಲ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next