Advertisement

“ಸಿಎಂಗೆ ದುಬಾರಿ ಗಿಫ್ಟ್ ‘

07:45 AM May 07, 2018 | Team Udayavani |

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಲೆಮರೆಸಿಕೊಂಡಿರುವ ಉದ್ಯಮಿಯನ್ನು ಭೇಟಿ ಮಾಡಿ ದುಬಾರಿ ಉಡುಗೊರೆ ಪಡೆದಿರುವ ಸಾಧ್ಯತೆ ಇದೆ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಡಾ| ಸಂಬೀತ್‌ ಪಾತ್ರ ಆರೋಪಿಸಿದ್ದಾರೆ.

Advertisement

2013ರ ಆಗಸ್ಟ್‌ 13ರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚೀನ ಪ್ರವಾಸಕ್ಕೆ ಹೋಗಿದ್ದ ಸಂದರ್ಭದಲ್ಲಿ ತಲೆಮರೆಸಿಕೊಂಡಿರುವ ಕ್ಯೂಐ ಕಂಪೆನಿಯ ಉದ್ಯಮಿ ವಿಜಯ್‌ ಈಶ್ವರನ್‌ ಅವನ್ನು ಭೇಟಿಯಾಗಿದ್ದಾರೆ. ಕರ್ನಾಟಕದಲ್ಲಿ ನಡೆದ ಜಾಗತಿಕ ಹೂಡಿಕೆದಾರರ ಸಮ್ಮೇಳನಕ್ಕೆ ಬರುವಂತೆ ವಿಜಯ್‌ ಈಶ್ವರನ್‌ ಅವರಿಗೆ ಆಹ್ವಾನ ನೀಡಿದ್ದರು ಎಂದವರು ಪತ್ರಿಕಾಗೋಷ್ಠಿಯಲ್ಲಿ ದಾಖಲೆ ಸಹಿತ ವಿವರಿಸಿದರು.

ವಿಜಯ್‌ ಈಶ್ವರನ್‌ ಅವರು ಚೆನ್ನೈ ಮತ್ತು ಮುಂಬಯಿಯಲ್ಲಿ ಜಾರಿ ನಿರ್ದೇಶನಾಲಯದಿಂದ ವಿಚಾರಣೆಗೆ ಒಳಪಟ್ಟಿದ್ದರು. ಎಸ್‌ಎಫ್ಐಯಿಂದ ರಾಷ್ಟ್ರೀಯ ಭದ್ರತೆಗೆ ಬೆದರಿಕೆ ಎಂದು ಘೋಷಿಸಲ್ಪಟ್ಟಿದ್ದ ಎಂಎಲ್‌ಎಂ ಉದ್ಯಮ ಹೊಂದಿದ್ದ ವಿಜಯ್‌ ಈಶ್ವರನ್‌, 2009ರಿಂದ ಪರಾರಿಯಾಗಿದ್ದಾರೆ.

ಚೀನದ ಭೇಟಿ ವೇಳೆ ಉದ್ಯಮಿ ವಿಜಯ್‌ ಈಶ್ವರನ್‌ ಅವರನ್ನು ಭೇಟಿ ಮಾಡಿದ್ದು ಏಕೆ ಎಂದು ಪ್ರಶ್ನಿಸಿದ ಪಾತ್ರ, ನಿಮಗೆ ಅವರು ಹೇಗೆ ಗೊತ್ತು? ಭೇಟಿಯ ಸಂದರ್ಭದಲ್ಲಿ ಏನಾದರೂ ಗಿಫ್ಟ್ ನೀಡಿದ್ದರೇ? ಅದು ಏನು? ಅದೇ ನಿಮ್ಮ ಹ್ಯುಬ್ಲೊಟ್‌ ಕೈಗಡಿಯಾರವೇ? ಇದನ್ನು ನಿಮ್ಮ ಆಸ್ತಿ ವಿವರದಲ್ಲಿ ಉಲ್ಲೇಖೀಸಿದ್ದಿರೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next